ಯದುವೀರ ಒಡೆಯರ್ ಮಾತನಾಡಿ, ಕೊಡಗಿಗೆ ತಾನು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು, ಇಲ್ಲಿನ ನಿಸರ್ಗ ಸೌಂದರ್ಯ ಮನಸೂರೆಗೊಂಡಿದೆ. ಮತ್ತೊಮ್ಮೆ ಇಂಥ ಪ್ರಕೃತಿಯ ವೈಭವದ ತಾಣಕ್ಕೆ ಭೇಟಿ ನೀಡಲು ಇಚ್ಛಿಸಿರುವುದಾಗಿ ಹೇಳಿದರು. ರಾಜವಂಶಸ್ಥರಿಗೆ ಮಡಿಕೇರಿಯಲ್ಲಿ ಮುಳಿಯ ಪ್ರತಿಷ್ಠಾನದ ಮುಖ್ಯಸ್ಥ ಕೇಶವಪ್ರಸಾದ್ ಮುಳಿಯ ಆತಿಥ್ಯ ನೀಡಿದರು. ಮಡಿಕೇರಿಯ ವ್ಯಾಲಿವ್ಯೂ ಹೊಟೇಲïನಲ್ಲಿ ಯದುವೀರ ಮತ್ತು ಪ್ರಮೋದಾದೇವಿ ಕಾಣಿಸಿಕೊಂಡಾಗ ಪ್ರವಾಸಿಗರು ಹಾಗೂ ಸ್ಥಳೀಯರು ಅಚ್ಚರಿಗೊಂಡರು.