ಕಿಮ್ಮನೆ ವಿರುದ್ಧ ಸಿಎಂಗೆ ಗುಪ್ತ ದೂರು

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅವರು ವಿಧಾನಸೌಧದ ಕಾರಿಡಾರ್‍ನಲ್ಲಿ ವಿನಾಕಾರಣ...
ಸಚಿವ ಕಿಮ್ಮನೆ ರತ್ನಾಕರ್
ಸಚಿವ ಕಿಮ್ಮನೆ ರತ್ನಾಕರ್

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅವರು ವಿಧಾನಸೌ ಧದ ಕಾರಿಡಾರ್‍ನಲ್ಲಿ ವಿನಾಕಾರಣ ನಿಂದಿಸಿದ್ದಕ್ಕಾಗಿ ಮೈಸೂರು ಕಾಗದ ಕಾರ್ಖಾನೆ  ವ್ಯವಸ್ಥಾಪಕ ನಿರ್ದೇಶಕ ಹರ್ಷಗುಪ್ತ ಶುಕ್ರವಾರ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಹರ್ಷಗುಪ್ತ ಸಚಿವರ ವಿರುದ್ಧ ದೂರು  ನೀಡಿ ದ್ದಾರೆ.ಎಂಪಿಎಂಸಿ ಕಾರ್ಖಾನೆ ಸ್ಥಗಿತಗೊಂಡಿರುವ ಕಾರಣ ಅಂದಾಜು ಒಂದು ಸಾವಿರ  ನೌಕರರಿಗೆ  ರಜೆ ಮೇಲೆ ಹೋಗಲು ಹೇಳಿದ್ದು ಈ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಸಚಿವ  ಕಿಮ್ಮನೆ ಹರ್ಷಗುಪ್ತರನ್ನು ತೀವ್ರ  ತರಾಟೆಗೆ ತೆಗೆದುಕೊಂಡಿದ್ದರು.

ಬಹಿರಂಗವಾಗಿ ನಿಂದಿಸಿದ್ದಕ್ಕಾಗಿ ಬೇಸತ್ತ ಹರ್ಷಗುಪ್ತ ರಜೆ ಮೇಲೆ ತೆರಳುವುದಾಗಿ  ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com