ಶ್ರುತಿ ರಾಜ್
ಶ್ರುತಿ ರಾಜ್

ನಟಿ ಶ್ರುತಿ ರಾಜ್ ಪ್ರಕರಣಕ್ಕೆ ತಿರುವು

ಸ್ಯಾಂಡಲ್‍ವುಡ್ ನಟಿ ಶ್ರುತಿ ರಾಜ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಶ್ರೀನಿವಾಸ ಗೌಡ ಎಂಬಾತನ ಬಳಿ...
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ರಾಜ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಶ್ರೀನಿವಾಸ ಗೌಡ ಎಂಬಾತನ ಬಳಿ ಪ್ರೀತಿಯ ನಾಟಕವಾಡಿ ರು.50 ಲಕ್ಷ ಹಣ ಪಡೆದಿರುವ ಆರೋಪ ಶ್ರುತಿ ರಾಜ್ ಅವರ ಮೇಲಿದೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರುತಿ, ``ತಾವು ಯಾವುದೇ ಹಣ ಪಡೆದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. ನಟಿ ಶ್ರುತಿ ಪರಿಶಿಷ್ಠ ವರ್ಗಕ್ಕೆ ಸೇರಿದವರಾಗಿದ್ದು, ಶ್ರೀನಿವಾಸ ಗೌಡ ಶ್ರುತಿಯವರ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. 
ಈ ಎಲ್ಲ ವಿಚಾರವಾಗಿ ತಮ್ಮ ನಿವಾಸದಲ್ಲಿ ಮಾಧ್ಯಮಕ್ಕೆ ತಿಳಿಸಿದ ನಟಿ ಶ್ರುತಿ ರಾಜ್, ``ಪೊಲೀಸರು ಕೂಡ ತಮ್ಮ ನೆರವಿಗೆ ಬರಲಿಲ್ಲ'' ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ``ನನ್ನಂತ ಎಷ್ಟೋ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ'' ನಡೆಯುತ್ತಿದೆ ಎಂದು ಕಣ್ಣೀರಿಟ್ಟರು. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com