ಮೈಸೂರು: ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿದ್ದಾಗಲೇ ಕರೆ ಮಾಡುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಬನ್ನಿ ಮಂಟಪದ ಬಳಿ ಈ ಘಟನೆ ನಡೆದಿದ್ದು, 18ವರ್ಷದ ಸೀತಾರಾಮ್ ಎಂಬ ಯುವಕನ ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸೀತಾರಾಮ್ ಮೂಲತಃ ಬಿಹಾರದವನಾಗಿದ್ದು, ಗಾರೆ ಕೆಲಸದ ನಿಮಿತ್ತ ಆತ ಮೈಸೂರಿನಲ್ಲಿ ತಂಗಿದ್ದ.
ಕಟ್ಟಡದ ಮಾಲೀಕರು ಸೀತಾರಾಮ್ ಗೆ ಅಲ್ಲಿಯೇ ಸಮೀಪ ಟೆಂಟ್ ಹಾಕಿಕೊಟ್ಟಿದ್ದರು. ಇಂದು ಬೆಳಗ್ಗೆ ಸೀತಾರಾಮ್ ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿ ಕರೆ ಮಾಡುತ್ತಿದ್ದಾಗ ಮೊಬೈಲ್ ಇದ್ದಕ್ಕಿದ್ದ ಹಾಗೆ ಸ್ಫೋಟಗೊಂಡಿದೆ. ಸ್ಫೋಟ ಶಬ್ಧ ಕೇಳುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಕೂಡಲೇ ಗಾಯಾಳು ಸೀತಾರಾಮ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಫೋಟದಿಂದಾಗಿ ಸೀತಾರಾಮ್ ಮುಖಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
Advertisement