೩೪೯ ಎಂ ಎಸ್ ಐ ಎಲ್ ಮದ್ಯದಂಗಡಿಗಳನ್ನು ಪ್ರಾರಂಭಿಸಲಿರುವ ರಾಜ್ಯ ಸರ್ಕಾರ

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಆದುದರಿಂದ ರಾಜ್ಯದಲ್ಲಿ ಲಾಟರಿ ಮತ್ತೆ ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಪ್ಪಳ: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಆದುದರಿಂದ ರಾಜ್ಯದಲ್ಲಿ ಲಾಟರಿ ಮತ್ತೆ ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದರೂ, ೨೦೧೫-೧೬ರ ಬಜೆಟ್ ನಲ್ಲಿ ಮೈಸೂರು ಇಂಂಟರ್ನ್ಯಾಶನಲ್ ಲಿಮಿಟೆಡ್ (ಎಂ ಎಸ್ ಐ ಎಲ್) ಮೂಲಕ ಹಲವಾರು ಮದ್ಯದಂಗಡಿಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎಂ ಎಸ್ ಐ ಎಲ್ ಮತ್ತು ಅಬಕಾರಿ ಅಲಾಖೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ೩೪೯ ಪ್ರದೇಶಗಳನ್ನು ಮದ್ಯದಂಗಡಿ ತೆರೆಯಲು ಗುರುತಿಸಲಾಗಿದೆ ಎನ್ನಲಾಗಿದೆ.

ಈ ಎಂ ಎಸ್ ಐ ಎಲ್ ಅಂಗಡಿಗಳ ಮೂಲಕ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮದ್ಯವನ್ನು ಮಾರುವ ಯೋಜನೆಯನ್ನು ಸರ್ಕಾರ ಹೊಂದಿದೆ. ಎಂ ಎಸ್ ಐ ಎಲ್ ನ ನಿರ್ವಾಹಕ ನಿರ್ದೇಶಕ ಹರಿಕುಮಾರ್ ಸಮೀಕ್ಷೆಯ ವರದಿಯನ್ನು ಅಬಕಾರಿ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com