ಸಿಲಿಂಡರ್ ಸ್ಪೋಟಿಸಿ ದಂಪತಿ, ಮಗುಗೆ ಗಾಯ

ಆಡುಗೋಡಿ ಸಮೀಪದ ರಾಜೇಂದ್ರ ನಗರದಲ್ಲಿ ಸೋರಿಕೆಯಾದ ಸಿಲಿಂಡರ್ ಸ್ಪೋಟಗೊಂಡು ದಂಪತಿ...
ಸಿಲಿಂಡರ್ ಸ್ಪೋಟಿಸಿ ದಂಪತಿ, ಮಗುಗೆ ಗಾಯ

ಬೆಂಗಳೂರು: ಆಡುಗೋಡಿ ಸಮೀಪದ ರಾಜೇಂದ್ರ ನಗರದಲ್ಲಿ ಸೋರಿಕೆಯಾದ ಸಿಲಿಂಡರ್ ಸ್ಪೋಟಗೊಂಡು ದಂಪತಿ ಹಾಗೂ ಒಂದೂವರೆ ವರ್ಷದ ಮಗು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಕುಮಾರ್(28), ಪತ್ನಿ ಕಸ್ತೂರಿ(24) ಹಾಗೂ ಮಗ ಮಿಥುನ್ ಗಾಯಗೊಂಡವರು. ಈ ಪೈಕಿ ಕುಮಾರ್‍ನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ನಸುಕಿನ 4.30ರ ಸುಮಾರಿಗೆ ಮಗ ಅಳುತ್ತಿದ್ದ ಕಾರಣ ಎಚ್ಚರಗೊಂಡ ಕುಮಾರ್, ಅಡುಗೆ ಕೋಣೆಗೆ ತೆರಳಿ ಹಾಲು ಕಾಯಿಸಲೆಂದು ಸಿಲಿಂಡರ್ ರೆಗ್ಯೂಲೇಟರ್ ಹಾಗೂ ಸ್ಟೌ ನಾಬ್ ಆನ್ ಮಾಡಿದ್ದಾರೆ.

ಗ್ಯಾಸ್ ಹಚ್ಚುವ ಮೊದಲೇ, ಮಗುವಿನ ಅಳು ಹೆಚ್ಚಾದ ಕಾರಣ ಸಮಾಧಾನ ಮಾಡಲೆಂದು ಸ್ಟೌ ನಾಬ್ ಬಂದ್ ಮಾಡದೇ ಹಾಗೇ ಮಗುವಿನ ಬಳಿ ತೆರಳಿದ್ದರು. 15 ನಿಮಿಷ ಸಮಾಧಾನ ಮಾಡಿ ಮತ್ತೆ ಹಾಲು ಕಾಯಿಸಲು ಹೋಗಿದ್ದಾರೆ. ಈ ವೇಳೆ ಗ್ಯಾಸ್ ಸೋರಿಕೆಯಾಗುತ್ತಿರುವುದನ್ನು ಅರಿಯದೆ ಪಾತ್ರೆ ಇಟ್ಟು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಪೋಟಗೊಂಡಿದೆ. ಗಾಯಗೊಂಡ ಕುಮಾರ್‍ನ ರಕ್ಷಣೆಗೆ ಬಂದ ಪತ್ನಿ ಕಸ್ತೂರಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಿರುಚಾಟ ಕೇಳಿದ ಸ್ಥಳೀಯರು ಮನೆಯೊಳಗೆ ಪ್ರವೇಶಿಸಿ ಗಾಯಗೊಂಡಿದ್ದ ಮೂವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com