ಪರೀಕ್ಷೆ ಬರೆದಿದ್ದು 800, ಅರ್ಹರಾಗಿದ್ದು 5 ಮಂದಿ !
ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಆಕಾಂಕ್ಷಿಗಳಾಗಿ ಪರೀಕ್ಷೆ ಬರೆದಿದ್ದ 800 ಅಭ್ಯರ್ಥಿಗಳ ಪೈಕಿ ಮೌಖಿಕ ಸಂದರ್ಶನದ ಹಂತಕ್ಕೆ ತಲುಪಲು ಸಾಧ್ಯವಾಗಿದ್ದು ಕೇವಲ 5 ಮಂದಿಗೆ ಮಾತ್ರ
ನಾನಾ ಜಿಲ್ಲೆಗಳ 17 ಜಿಲ್ಲಾನ್ಯಾಯಾಧೀಶರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾಸನಿಸಲಾಗಿತ್ತು. 1169 ಮಂದಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 2014ರ ಅ.11 ರಂದು ಮೊದಲ ಹಂತದ ಲಿಖಿತ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಹಾಜರಾದ 800 ಮಂದಿಯಲ್ಲಿ ತೇರ್ಗಡೆಯಾಗಿದ್ದು ಕೇವಲ 5 ಮಂದಿ ಮಾತ್ರ. ಈ ಐವರ ಪೈಕಿ ಮೌಖಿಕ ಸಂದರ್ಶನದಲ್ಲಿ ಉತ್ತೀರ್ಣರಾಗಿ ಕಟ್ಟಕಡೆದಾಗಿ ಎಷ್ಟು ಜನ ಉಳಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.
ಸಿವಿಲ್ ಮತ್ತು ಕ್ರಿಮಿನಲ್ಲ ಲಾ ಎಂಬ ಎರಡು ಭಾಗಗಳಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು. ಈ ಹಂತದಲ್ಲಿ ಎರಡಂಕಿದಾಟಲೂ ಕೆಲವು ಅಭ್ಯರ್ಥಿಗಳು ಹರಸಾಹಸಪಟ್ಟಿದ್ದಾರೆ. 17 ಹುದ್ದೆಗಳಿದ್ದು, 5 ಮಂದಿ ಮಾತ್ರ ತೇರ್ಗಡೆ ಹೊಂದಿರುವುದರಿಂದಿ ಉಲಿದ 12 ಹುದ್ದಿಗಳನ್ನು ತುಂಬಲು ಸಾಹಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೇರೆ ವೃತ್ಥಿಯಂತೆ ಹೊಸ ಬರಿಗೆ ನೇರವಾಗಿ ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಪರೀಕ್ಷೆಗೆ ಕೂರಲು ಅರ್ಹತೆ ಇರುವುದಿಲ್ಲ. 10 ವರ್ಷ ವಕೀಲಿ ವೃತ್ತಿ ಮಾಡಿದವರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ರೀತಿ ವಕೀಲ ವೃತ್ತಿಯಲ್ಲಿದ್ದವರಿಗೇ ಈ ಹುದ್ದೆ ಅಲಂಕರಿಸಲು ಸಾಧ್ಯವಾಗುತ್ತಿಲ್ಲ.
ಈ ಫಲಿತಾಂಶದ ಅಂಕಿ ಅಂಶ ಗಮನಿಸಿದರೆ ಯುವಕರಲ್ಲಿ ಕಲಿಕೆಯ ಗುಣಮಟ್ಟ ಯಾವ ಹಂತದಲ್ಲಿದೆ ಎಂಬುದು ಗೋಚರವಾಗುತ್ತದೆ. ಪಠ್ಯ ಕ್ರಮ ಅಷ್ಟೇನೂ ಕಷ್ಟವಿಲ್ಲದಿದ್ದರೂ ವೃತ್ತಿಯಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿರುವುದಂತೂ ಸತ್ಯ ಎಂದು ನ್ಯಾಯವಾದಿ ಎನ್.ಪಿ. ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ