ಶಿವಮೊಗ್ಗ: ಗಲಭೆಯಿಂದ ತತ್ತರಿಸಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬೆಳಗಿನ ವೇಳೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು ವಹಿವಾಟು ಎಂದಿನಂತೆಯೇ ಇತ್ತು. ಭಾನುವಾರದ್ದರಿಂದ ಮಧ್ಯಾಹ್ನದ ನಂತರ ಮುಚ್ಚಿದ್ದವು. ಬಸ್ ಆಟೋ ಸಂಚಾರ ಎಂದಿನಂತಿತ್ತು. ಔಷಧಾಲಯ, ಆಸ್ಪತ್ರೆ, ಹಾಲು ಸೇರಿದಂತೆ ಜನಜೀವನಕ್ಕೆ ತುರ್ತು ಅಗತ್ಯವಿದ್ದ ವಸ್ತುಗಳಿಗೆ ಯಾವುದೇ ತಡೆಯಾಗಲಿಲ್ಲ. ನಾಗರಿಕರು ಸಹ ಮಾಮೂಲಿ ಜೀವನಕ್ಕೆ ಮರಳಿದ್ದರು. ಸಂಜೆ ವಿನೋಬನಗರದ 100 ಅಡಿ ರಸ್ತೆಯಲ್ಲಿ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
ಅದನ್ನು ಹೊರತುಪಡಿಸಿ ಶನಿವಾರ ಸಂಜೆ ನಂತರ ಅಹಿತಕರ ಘಟನೆಗಳು ನಡೆದಿಲ್ಲ. ಶನಿವಾರ ರಾತ್ರಿ ನಗರಾದ್ಯಂತ ಕಾರ್ಯಾಚರಣೆ ನಡೆಸಿದ ಪೊಲೀಸರು 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Advertisement