ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಎರಡೂ ವರ್ಷ ಪ್ರಾಯದ ಗಂಡು ಹುಲಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ.
ಕುಂದಕೆರೆ ವಲಯದಲ್ಲಿ ಹುಲಿ ಮೃತಪಟ್ಟಿದ್ದು, ನಿಖರವಾದ ಕಾರಣ ತಿಳಿದು ಬಂದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಗಡಿ ಮಧ್ಯದ ಅರಣ್ಯದಲ್ಲಿ ಈ ಹುಲಿ ಅಸುನೀಗಿದೆ.
ಇದು ಬಂಡೀಪುರ ಅರಣ್ಯವೋ ಅಥವಾ ಮಧುಮಲೆ ಅರಣ್ಯವೋ ಎಂಬುದು ಸ್ಪಷ್ಟವಾಗಿಲಿಲ್ಲ. ಸ್ಥಳಕ್ಕೆ ಕುಂದಕೆರೆ ಆರ್ ಎಫ್ಸಿ ಮಹೇಶ್ ಮಾಲಗತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement