ಬೆಂಗಳೂರು: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಜ. 11ಕ್ಕೆ ಬೆಂಗಳೂರಿಗೆ ಬರಲಿದ್ದು, ಆಸಕ್ತರು ಕನಿಷ್ಠ ರು. 25,000 ದೇಣಿಗೆ ನೀಡಿ ಇವರ ಜತೆ ಕುಳಿತು ಊಟ ಮಾಡಬಹುದು ಎಂದು ಪಕ್ಷದ ಕಾರ್ಯಕರ್ತ ಸಿದ್ದಾರ್ಥ ತಿಳಿಸಿದ್ದಾರೆ.
ಮುಂಬರುವ ದೆಹಲಿ ಚುನಾವಣೆಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಕ್ಕಾಗಿ ಕೇಜ್ರಿ ವಾಲ್ ಬರುತ್ತಿದ್ದು, ಸೆಲ್ಪಿ ವಿತ್ ಮಫ್ಲೆರ್ಮ್ಯಾನ್ ಅಭಿಯಾನ ಆರಂಭಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಿಶುದ್ಧ ರಾಜಕಾರಣಕ್ಕೆ ಆಮ್ ಆದ್ಮಿ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ನಾಗರಿಕರಿಗಾಗಿ ಲಂಚ್ ವಿತ್ ಅರವಿಂದ್ ಎಂಬ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಪಕ್ಷ ಮುಂದಾಗಿದೆ. ಇತರ ರಾಜಕೀಯ ಪಕ್ಷಗಳು ಅನಾಮಿಕ ಮೂಲಗಳಿಂದ ಹಣಪಡೆಯುತ್ತಿರುವ ಸಂದರ್ಭದಲ್ಲಿ ಪಾರದರ್ಶಕ ದೇಣಿಗೆ ಸಂಗ್ರಹಣೆಯೇ ಪ್ರಾಮಾಣಿಕ ರಾಜ ಕಾರಣದ ಮೊದಲ ಮೆಟ್ಟಿಲು ಎಂದು ಆಮ್ ಆದ್ಮಿ ಭಾವಿಸುತ್ತದೆ ಎಂದು ಹೇಳಿದರು. ಎಲ್ಲ ದೇಣಿಗೆದಾರರ ಹೆಸರನ್ನು ಆನ್ಲೈನ್ ನಲ್ಲಿ ಪ್ರಕಟಿಸಲಾಗುವುದು. ಪ್ರತಿಯೊಬ್ಬರ ಹಣಕ್ಕೂ ನಿಖರ ಮಾಹಿತಿ ಇರುತ್ತದೆ. ಆಸಕ್ತರು 080-33013349 ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದರು. ಪಕ್ಷದ ಕಾರ್ಯಕರ್ತರಾದ ವಿ. ಬಾಲ, ಬಾಬು ಮ್ಯಾಥ್ಯೂ, ಪೃಥ್ವಿ, ರಾಧಾಕೃಷ್ಣ, ರೋಹಿತ್ ರಂಜನ್, ಮಹಾಂತೇಶ್ ಉಪಸ್ಥಿತರಿದ್ದರು.
Advertisement