ಇವತ್ತು ಕಿಸ್ ಡೇ, ನಾಳೆ ಸ್ಲೀಪಿಂಗ್ ಡೇ

ಈ ಬಗ್ಗೆ ಕ್ರಮ ತಗೊಳ್ಳಿ ಅಂದ್ರೆ ಮುಖ್ಯಮಂತ್ರಿ, ಗೃಹ ಸಚಿವ ಜಾರ್ಜ್ ಕಾನೂನು ಕ್ರಮ ತಗೋತೀವಿ ಅಂತಾರೆ...
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್

ಶಿವಮೊಗ್ಗ: ಇವತ್ತು ಕಿಸ್ ಡೇ ಮಾಡ್ತೀವಿ ಅಂತಾರೆ. ಮುಂದೆ ಸ್ಲೀಪಿಂಗ್ ಡೇ ಮಾಡ್ತೀವಿ ಅಂತಾರೆ. ಅದನ್ನೆಲ್ಲಾ ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.

ಈ ಬಗ್ಗೆ ಕ್ರಮ ತಗೊಳ್ಳಿ ಅಂದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಾರ್ಜ್ ಕಾನೂನು ಕ್ರಮ ತಗೋತೀವಿ ಅಂತಾರೆ.

ಅವರ ಕುಟುಂಬದವರು ಇದರಲ್ಲಿದ್ದರೆ ಸುಮ್ಮನಿರುತ್ತಿದ್ರಾ ಎಂದು ಪ್ರಶ್ನಿಸಿದರು. ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಹಿಂದೂ ಧರ್ಮ ಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಉಳಿಸಲು ಹೋರಾಟ ಮಾಡಿದ್ದಕ್ಕೆ ತಮ್ಮ ಮೇಲೆ ಇದುವರೆಗೂ 92 ಕೇಸ್ ದಾಖಲಾಗಿದ್ದು ಶೀಘ್ರವೇ ಇದು 100 ಆಗಲಿದೆ. ಆದರೆ ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ.

ಇನ್ನೂ ಮುಖ್ಯಮಂತ್ರಿಗಳು ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡುತ್ತೇನೆ ಎನ್ನುತ್ತಾರೆ. ಆದರೆ ಸೇನೆಯನ್ನು ನಿಷೇಧಿಸುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಮ್ಮ ಹೆಸರಿನಲ್ಲೇ ರಾಮ ಇದ್ದಾನೆ ಎಂದು ಗೊತ್ತಾಗಲಿ ಎಂದು ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com