ಹೊಸಪೇಟೆ: ಮೂರು ದಿನಗಳ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಲಿದ್ದಾರೆ.
ನಗರದ ಗಾಯತ್ರಿ ಪೀಠದ ಹತ್ತಿರದ ಮೈದಾನದಲ್ಲಿ ನಿರ್ಮಿಸಿರುವ ಶ್ರೀಕೃಷ್ಣದೇವರಾಯ ಮುಖ್ಯವೇದಿಕೆಯಲ್ಲಿ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಸಚಿವರಾದ ಆರ್.ವಿ.ದೇಶಪಾಂಡೆ, ಪಿ.ಟಿ.ಪರಮೇಶ್ವರ ನಾಯ್ಕ, ಆರ್.ರೋಷನ್ಬೇಗು, ಉಮಾಶ್ರೀ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಉತ್ಸವಕ್ಕಾಗಿ ವಿಜಯನಗರ ಸಾಮ್ರಾಜ್ಯ ನೆನಪಿಸುವ ಐದು ವೇದಿಕೆ ನಿರ್ಮಿಸಲಾಗಿದೆ. 80 ಅಡಿ ಅಗಲ, 60 ಅಡಿ ಉದ್ದ ಹಂಪಿ ಕಮಲ್ ಮಹಲ್ ಮಾದರಿಯಲ್ಲಿ ಮುಖ್ಯವೇದಿಕೆ ನಿರ್ಮಿಸಲಾಗಿದ್ದು, ಬದಿಯಲ್ಲಿ ವೀಕ್ಷಣಾಗೋಪುರ ಸಹ ನಿರ್ಮಿಸಲಾಗಿದೆ.
ಅಲ್ಲದೆ ಕಲ್ಲಿನ ತೇರಿನ ಕಟೌಟ್ನಲ್ಲಿ ವೇದಿಕೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ವೀಕ್ಷಿಸಲು ಎಲ್ಇಡಿ ಅಳವಡಿಸಿ ಜನರ ವೀಕ್ಷಣೆಗೆ ವೇದಿಕೆ ನಿರ್ಮಾಣ ಮಾಡಲಾಗಿದೆ.
Advertisement