ಕಾಲುವೆಗೆ ಉರುಳಿದ ಟ್ರ್ಯಾಕ್ಟರ್: ಒಂದೇ ಕುಟುಂಬದ ನಾಲ್ವರು ಸಾವು

ಕಾಲುವೆಗೆ ಉರುಳಿದ ಟ್ರ್ಯಾಕ್ಟರ್(ಸಾಂದರ್ಭಿಕ ಚಿತ್ರ)
ಕಾಲುವೆಗೆ ಉರುಳಿದ ಟ್ರ್ಯಾಕ್ಟರ್(ಸಾಂದರ್ಭಿಕ ಚಿತ್ರ)
Updated on

ಜೋಗುಂಡಬಾವಿ(ಯಾದಗಿರಿ): ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಜೋಗುಂಡಬಾವಿ ಗ್ರಾಮದ ನಾರಾಯಣಪುರ ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್ ಹಾಗೂ ಬಟ್ಟೆ ತೊಳೆಯಲು ನಾರಾಯಣಪುರ ಎಡದಂಡೆ ಕಾಲುವೆಗೆ ತೆರಳಿದ್ದರು. ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಚಾಲಕ ಶರಣಪ್ಪ ಟ್ರ್ಯಾಕ್ಟರನ್ನು ಹಿಂಬದಿಯಾಗಿ ಚಲಾಯಿಸುತ್ತಿರುವಾಗ ಕಾಲುವೆಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.

ಮೃತರೆಲ್ಲರು ಸುರಪುರ ತಾಲೂಕಿನ ಎಣ್ಣಿವಡಗೇರಾ ಗ್ರಾಮದ ಗದ್ದೆಮ್ಮ(30), ಮಕ್ಕಳಾದ ಕಾಳಿಂಗ(7), ಬೀರಲಿಂಗ(8) ಶರಣಪ್ಪ(28) ಎಂದು ಗುರುತಿಸಲಾಗಿದೆ.

ಈ ದುರಂತ ಸಂಭವಿಸಿ ಎರಡು ಗಂಟೆ ಕಳೆದರು ಘಟನಾ ಸ್ಥಳಕ್ಕೆ ಪೊಲೀಸರು ಬಾರದ ಹಿನ್ನೆಲೆಯಲ್ಲಿ ಎಣ್ಣೆವಡಗೇರಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾರಾಯಣಪುರ ಎಡದಂಡೆ ಕಾಲುವೆಗೆ ನಿನ್ನೆಯಷ್ಟೇ ಬಸವಸಾಗರ ಡ್ಯಾನಿಂದ ನೀರು ಹರಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com