ಬೆಂಗಳೂರು: ಭಾಗ್ಯ ಸರಣಿ ಯೋಜನೆಗಾಗಿ ಕೋಟ್ಯಂತರ ರು. ವ್ಯಯಿಸುತ್ತಿರುವ ರಾಜ್ಯ ಸರ್ಕಾರ, ಗೋದಾಮು ನಿರ್ಮಾಣಕ್ಕೆ ಮಾತ್ರ ನಬಾರ್ಡ್ನಿಂದ ರು 1,000 ಕೋಟಿ ಸಾಲ ಎತ್ತಲು ಮುಂದಾಗಿದೆ!
ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನು ಕೇಂದ್ರಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.
ಹೀಗಾಗಿ ಸಾಮರ್ಥ್ಯದಷ್ಟು ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗೋದಾಮು ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಅಗತ್ಯ ಧನ ಸಹಾಯವನ್ನು
ನಬಾರ್ಡ್ನಿಂದ ಸಾಲ ರೂಪದಲ್ಲಿ ಪಡೆಯುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.
ಜತೆಗೆ ಪ್ರತಿ ಹೋಬಳಿಯ ನಾಡಕಚೇರಿಯಲ್ಲಿ ಪಡಸಾಲೆ ಯೋಜನೆ ಮತ್ತು 1.5 ಲಕ್ಷ ಫಲಾನುಭವಿಗಳಿಗೆ ಗೌರವ ಯೋಜನೆಯಲ್ಲಿ ಸ್ನಾನಗೃಹ ನಿರ್ಮಿಸುವ ಇನ್ನಷ್ಟು `ಭಾಗ್ಯಸರಣಿ' ಯೋಜನೆಗೂ ಅನುಮತಿ ನೀಡಲಾಗಿದೆ. ಮಾತ್ರವಲ್ಲ ಕೇಂದ್ರ ಹಣಕಾಸು ಆಯೋಗ ರಾಜ್ಯಕ್ಕೆ ನೀಡುವ ಅನುದಾನದಲ್ಲಿನ ಕೆಲ ಭಾಗವನ್ನು ಗ್ರಾಮ ಪಂಚಾಯಿತಿಗಳು ಬೆಸ್ಕಾಂಗಳಿಗೆ ನೀಡಬೇಕಿದ್ದ ರು. 3236,16 ಕೋಟಿ ವಿದ್ಯುತ್ ಬಿಲ್ ಪಾವತಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಪ್ರಮುಖ ನಿರ್ಧಾರಗಳು ಹೀಗಿವೆ...
Advertisement