ಬೆಂಗಳೂರಿನ: ಬೆಂಗಳೂರಿನ ರಾಜರಾಜೇಶ್ವರಿನಗರದ ಶಕ್ತಿ ಹಿಲ್ಸ್ ರೆಸಾರ್ಟ್ ಹಾಗೂ ಷಣ್ಮುಗ ದೇವಸ್ಥಾನದ ಜಾಗವನ್ನು ಸರ್ಕಾರ ಶನಿವಾರ ವಶಕ್ಕೆ ಪಡೆದಿದೆ.
ಇಂದು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಡಾ.ಬಿ.ಆರ್.ದಯಾನಂದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಯಲ್ಲಿ, ಕೋಟ್ಯಂತರ ರುಪಾಯಿ ಬೆಲೆ ಬಾಳುವ, ವಡ್ಡರಹಳ್ಳಿ ಸರ್ವೆ ನಂಬರ್ 8ರಲ್ಲಿರುವ ಸುಮಾರು 6.1 ಎಕರೆ ಒತ್ತುವರಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ.
ಶಕ್ತಿಹಿಲ್ಸ್ ರೆಸಾರ್ಟ್ ಡಾ. ಆರ್. ಅರುಣಾಚಲಂ ಅವರಿಗೆ ಸೇರಿದ್ದು, ಅಕ್ರಮವಾಗಿ ಸುಮಾರು 15 ಕೊಠಡಿ ಇರುವ ಐಷಾರಾಮಿ ರೆಸಾರ್ಟ್ ನಿರ್ಮಿಸಿದ್ದರು ಎನ್ನಲಾಗಿದೆ.
Advertisement