ನೆಲಕ್ಕುರುಳಿದ ಹಂಪಿಯ ಎರಡು ಸಾಲು ಮಂಟಪ

ಮಂಗಳವಾರ ಸುರಿದ ಧಾರಾಕಾರ ಮಳೆಗೆ ಹಂಪಿಯ ಕೃಷ್ಣ ದೇವಸ್ಥಾನದ ಎದುರಿಗಿರುವ ಕೃಷ್ಣಬಜಾರ್ ನ ಪುಷ್ಕರಣಿ ಬಳಿಯ ಸಾಲು ಮಂಟಪಗಳಲ್ಲಿ 2 ಮಂಟಪಗಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೊಸಪೇಟೆ: ಮಂಗಳವಾರ ಸುರಿದ ಧಾರಾಕಾರ ಮಳೆಗೆ ಹಂಪಿಯ ಕೃಷ್ಣ ದೇವಸ್ಥಾನದ ಎದುರಿಗಿರುವ ಕೃಷ್ಣಬಜಾರ್ ನ ಪುಷ್ಕರಣಿ ಬಳಿಯ ಸಾಲು ಮಂಟಪಗಳಲ್ಲಿ 2 ಮಂಟಪಗಳು ನೆಲಕ್ಕುರುಳಿವೆ.

ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ 80 ಅಡಿ ಉದ್ದದ 50ಕ್ಕೂ ಹೆಚ್ಚು ಕಂಬಗಳು ಮತ್ತು ಚಾವಣಿಗೆ ಹಾನಿಯಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೂ ಮಳೆ ಸುರಿದಿದ್ದರಿಂದ ಮಳೆಗೆ ಸಾಲು ಮಂಟಪಗಳು ನೆಲಕ್ಕೆ ಉರುಳಿ ಬಿದಿದೆ. ರಾತ್ರಿ ಮಂಟಪದಲ್ಲಿ ಯಾರು ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಸಿಲ್ಲ.

ಬುಧವಾರ ಬೆಳಗ್ಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೂ ಸುರಿದ ಮಳೆಯಿಂದಾಗಿ ಸಾಲು ಮಂಟಪಗಳು ನೆನೆದು ಮತ್ತು ಮಂಟಪಗಳ ಮೇಲೆ ನೀರು ಸರಿಯಾಗಿ ಹರಿದು ಹೋಗದಿರುವುದರಿಂದ ಮಳೆಗೆ 2 ಸಾಲು ಮಂಟಪಗಳು ನೆಲಕಚ್ಚಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com