ಸಾವಿನ ವೈಭವಕ್ಕಿಂತ ವಿಶ್ವಾಸ ತುಂಬಬೇಕು

ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬೇಕಾದರೆ ರೈತರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಆಗಬೇಕಿದೆ ಎಂದು ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮನನೊಂದ ರೈತ( ಸಾಂದರ್ಭಿಕ ಚಿತ್ರ)
ಮನನೊಂದ ರೈತ( ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ದೇಶದ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿರುವ ರೈತ ಸಂಕಷ್ಟಗಳ ಸೇರೆಮಾಲೆಗೆ ಸಿಲುಕಿದ್ದು ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ದುರಂತಗಳು ಸಂಭವಿಸುತ್ತಿವೆ. ಇಂತಹ ಪ್ರಕರಣಗಳು ಇತರೆ ರೈತರ ಆತ್ಮಸ್ಥೈರ್ಯವನ್ನು ಕುಂದಿಸುತ್ತಿದೆ.

ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬೇಕಾದರೆ ರೈತರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಆಗಬೇಕಿದೆ ಎಂದು ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕೆಗಳು ಅದರಲ್ಲಿಯೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ರೈತರ ಸಾವನ್ನು ವೈಭವೀಕರಿಸಿ ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ.

ಆತ್ಮಹತ್ಯೆಗೆ ಹಲವು ಕಾರಣ: ಸುತ್ತಮುತ್ತಲಿನ ಪರಿಸರ, ಸಂಸಾರದ ಜಂಜಾಟ ಇದೆಲ್ಲದಕ್ಕಿಂತ ಮಿಗಿಲಾಗಿ ಸಾಲ ಬಾಧೆ ಆತನನ್ನು ದಿನಂಪ್ರತಿ ಕಾಡುತ್ತಿರುತ್ತದೆ ಎಂಬುದು ಪ್ರಮುಖ ಕಾರಣ ಎನ್ನುತ್ತಾರೆ ನಿಮ್ಹಾನ್ಸ್ ನಿರ್ದೇಶಕರಾದ ಡಾ.ಸತೀಶ್ ಚಂದ್ರ. ಇದೆಲ್ಲವನ್ನೂ ತಡೆ ಹಿಡಿಯಬೇಕಾದರೆ ರೈತನಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯಬೇಕಿದೆ.

ಯಾವೊಬ್ಬ ರೈತನೂ ತಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸುವುದಿಲ್ಲ. ಆಟ ಈ ಕುರಿತು ತನ್ನ ಆಪ್ತರ ಬಳಿ ಮೊದಲು ಸುಳಿವು ನೀಡಿರುತ್ತಾನೆ. ಆಪ್ತರ ಜತೆ ತನ್ನ ಅಳಲನ್ನು ತೋಡಿಕೊಂಡ ತಕ್ಷಣವೇ ಅಂಥವರು ಎಚ್ಚೆತ್ತುಕೊಂಡು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದರಿಂದ ಈ ರೀತಿಯ ಘಟನೆಗಳನ್ನು ತಡೆಹಿಡಿಯಬಹುದು ಎನ್ನುತ್ತಾರೆ ಡಾ.ಸತೀಶ್ ಚಂದ್ರ. ಆತ್ಮಹತ್ಯೆ ಪರಿಹಾರವಲ್ಲ, ನಿಮ್ಮೊಂದಿಗೆ ಸರ್ಕಾರ ಇದೆ. ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ರೈತರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com