ಬೆಂಗಳೂರು: ರಾಜ್ಯದಲ್ಲಿ ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೊನೆ
ಅಸ್ತ್ರ ಪ್ರಯೋಗಿಸಲು ಅಂತಿಮ ತಯಾರಿ ಮಾಡಿಕೊಂಡಿದೆ. ಈ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ. ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು 1ರಿಂದ 5ನೇ ತರಗತಿವರೆಗೆ ಕನ್ನಡ ಕಡ್ಡಾಯಗೊಳಿಸುವ ಜೊತೆಗೆ, 1ರಿಂದ 12ನೇ ತರಗತಿ ವರೆಗೆ ಒಂದು ಭಾಷೆಯಾಗಿ ಕನ್ನಡ ಕಲಿಸುವ ವಿಧೇಯಕಕ್ಕೂ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಕಾನೂನು ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಸುದ್ದಿ ಗಾರರೊಂದಿಗೆ ಗುರುವಾರ ಮಾತನಾಡಿ,`1-5ನೇ ತರಗತಿವರೆಗೆ ಭಾಷಾ ಮಾಧ್ಯಮ ಕನ್ನಡದಲ್ಲಿರಬೇಕೆಂದು ನಿರ್ಣಯ ಕೈಗೊಳ್ಳುತ್ತೆ ೀವೆ. ಅದನ್ನು ಸದನದಲ್ಲಿ ಮಂಡಿಸುವ ಮೂಲಕ ನ್ಯಾಯಾಲಯಕ್ಕೆ ನಾಡಿನ ಜನರ ಅಭಿಪ್ರಾಯ ಎಂದು ತಿಳಿಸುವ ಜೊತೆಗೆ, ನಾಡಿನ ಜನರಿಗೆ ಸಹ ಅದನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ' ಎಂದು ಹೇಳಿದರು. ಶಿಕ್ಷಣ ಎಂಬುದು ಕೇಂದ್ರ ಮತ್ತು ರಾಜ್ಯ ಎರಡರ ವಿವೇಚನಾ ಪಟ್ಟಿಯಲ್ಲಿರುವ ಕಾರಣ ಕೇಂದ್ರ ಸಹ ಸಂವಿಧಾನಕ್ಕೆ ತಿದ್ದುಪಡಿ ತರಬೇ ಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ, ಮಾನವಸಂಪನ್ಮೂಲ ಸಚಿವರು, ಗೃಹ ಸಚಿವರಿಗೂ ಪತ್ರ ಬರೆಯಲಾಗಿದೆ. ಜೊತೆಗೆ ರಾಜ್ಯದ ಎಲ್ಲ ಸಚಿವರು, ಸಂಸದರಿಗೂ ಪತ್ರ ಬರೆದು ಖಾಸಗಿ ಕಾಯ್ದೆ ಮಂಡಿಸಲು ಕೋರಲಾಗಿದೆ ಎಂದರು.ಹೊಸ ಶಾಲೆ ಆರಂಭಿಸುವವರಿಗೆ ಕೆಲವು ನಿಯಮ ಜಾರಿಗೊಳಿಸಿ ಅಧಿಸೂಚನೆ ಹೊರ ಡಿಸಲಾಗಿತ್ತು. ಅದನ್ನು ಪ್ರಶ್ನಿಸಿದ್ದ ಅರ್ಜಿ ಯನ್ನು ಕೋರ್ಟ್ ಪರಿಹರಿಸಿದೆ. ಇದೀಗಅದಕ್ಕೆ ಒಂದು ಬದಲಾವಣೆ ಮಾಡಿ ಜಾರಿ ತರಲಾಗುತ್ತಿದೆ. ಈ ವಿಚಾರದಲ್ಲಿ ಮಾರ್ಚ್
31ರೊಳಗೆ ಸ್ಪಷ್ಟ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ನೀಡ ಬೇಕಾಗಿದೆ ಎಂದರು.
Advertisement