ಬೆಂಗಳೂರು: ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ ವೈಯಾಲಿಕಾವಲ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪುಟ್ಟೇಗೌಡ ಅವರನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ವೈಯ್ಯಾಲಿಕಾವಲ್ನಲ್ಲಿ ಬೈಕ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಪ್ರಕರಣಗಳು ಹೆಚ್ಚಾಗಿದ್ದವು. ಕೆಲ ದಿನಗಳ ಹಿಂದೆ ಪುಟ್ಟೇಗೌಡರು ರಾತ್ರಿ ಗಸ್ತಿನಲ್ಲಿದ್ದಾಗ ಅವರ ಮುಂದೆಯೇ ಕಿಡಿಗೇಡಿಗಳು ಗಲಾಟೆ ಮಾಡಿಕೊಂಡು ಹೋಗಿ ಬೈಕ್ಗಳಿಗೆ ಬೆಂಕಿ ಹಚ್ಚಿದ್ದರು. ಈ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.
ತಮ್ಮೆದುರೇ ಅಪರಾಧ ಚಟುವಟಿಕೆ ನಡೆದರೂ ನಿಯಂತ್ರಿಸಲು ವಿಫಲರಾಗಿರುವ ಬಗ್ಗೆತನಿಖೆ ನಡೆಸಿದ ಎಸಿಪಿ ಶೋಭಾರಾಣಿ ವರದಿ ನೀಡಿದ್ದರು. ಇನ್ನು ಈ ಪ್ರದೇಶದಲ್ಲಿ ವಿಡಿಡಿಯೋ ಗೇಮ್ ಪಾರ್ಲರ್, ಗ್ಯಾಬ್ಲಿಂಗ್ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಅವುಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಆರೋಪವಿದೆ.
Advertisement