ಚಿತ್ರನಟ ರಮೇಶ್‌ ಭಟ್‌ ಕಾರು ಅಪಘಾತ

ಕನ್ನಡದ ಹಿರಿಯ ಚಿತ್ರನಟ ರಮೇಶ್‌ ಭಟ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಭಾನುವಾರ ರಾಮನಗರದಲ್ಲಿ ನಡೆದಿದೆ...
ರಮೇಶ್‌ ಭಟ್‌
ರಮೇಶ್‌ ಭಟ್‌

ಬೆಂಗಳೂರು: ಕನ್ನಡದ ಹಿರಿಯ ಚಿತ್ರನಟ ರಮೇಶ್‌ ಭಟ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಭಾನುವಾರ ರಾಮನಗರದಲ್ಲಿ ನಡೆದಿದೆ.

ಸೋಮೇಶ್ವರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವಘಾತವಾಗಿದ್ದು, ರಮೇಶ್ ಭಟ್ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ರಮೇಶ್ ಭಟ್ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ರಮೇಶ್‌ ಅವರು ಕಾರಿನಲ್ಲಿ ಬೆಂಗಳೂರಿನಿಂದ ಮಾಗಡಿಗೆ ಚಿತ್ರೀಕರಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಇದರಿಂದ ರಮೇಶ್‌ ಭಟ್‌ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ "ವೀರ ಮಡಿವಾಳ ಮಾಚಯ್ಯ" ಚಿತ್ರೀಕರಣಕ್ಕೆ ಭಾಗಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com