ಉಮಾಶ್ರೀ ಪತ್ರಪ್ರಮಾದ!

ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿಧನರಾಗುತ್ತಾರೆ ಎಂಬುದು ನಟಿ ಕಂ ಸಚಿವೆ ಉಮಾಶ್ರೀ ಅವರಿಗೆ ಒಂದು ದಿನ ಮುನ್ನ ಅಂದರೆ ಬುಧವಾರವೇ ಗೊತ್ತಿತ್ತಂತೆ!...
ಸಚಿವೆ ಉಮಾಶ್ರೀ
ಸಚಿವೆ ಉಮಾಶ್ರೀ

ಬೆಂಗಳೂರು: ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿಧನರಾಗುತ್ತಾರೆ ಎಂಬುದು ನಟಿ ಕಂ ಸಚಿವೆ ಉಮಾಶ್ರೀ ಅವರಿಗೆ ಒಂದು ದಿನ ಮುನ್ನ ಅಂದರೆ ಬುಧವಾರವೇ ಗೊತ್ತಿತ್ತಂತೆ!

ಈ `ದಿವ್ಯದೃಷ್ಟಿ' ಎಲ್ಲರ ಅರಿವಿಗೂ ಬರಬಾರದೆಂದು ಶುಕ್ರವಾರದವರೆಗೂ ಕಾದಿದ್ದರಂತೆ. ಅದಕ್ಕೇ ಶುಕ್ರವಾರ ಸಂತಾಪ ಸೂಚಿಸಿದ್ದಾರೆ!! ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ನಿಧನರಾದದ್ದು ಗುರುವಾರ. ಈ ಸುದ್ದಿ ಉಮಾಶ್ರೀ ಗಮನಕ್ಕೆ ಬಂದಿಲ್ಲವೇನೋ!?. ಅಥವಾ `ಅತ್ಯಂತ ಕಾರ್ಯ ಒತ್ತಡ'ದಲ್ಲಿ `ಇಂತಹ' ಮರೆತುಹೋಯಿತೇನೋ. ಅದಕ್ಕೇ `ಬಿಡುವು' ಮಾಡಿಕೊಂಡು ಶುಕ್ರವಾರ ಸಂಜೆ ಶೋಕವ್ಯಕ್ತಪಡಿಸಿದ್ದಾರೆ.

ಒಂದು ದಿನ ತಡವಾಗಿದ್ದಕ್ಕೆ ಸಚಿವೆಯೊಬ್ಬರಿಗೆ ರಾಜ್ಯದ ಆಗುಹೋಗುಗಳ ತಲೆ `ಭಾರ'ವಿನಾಯಿತಿ ಕೊಡಬಹುದೇನೋ. ಆದರೆ, ಅವರು ಶುಕ್ರವಾರ ಕಳುಹಿಸಿರುವ ಶೋಕ ಸಂದೇಶದಲ್ಲಿ ಮಾ.11ರ ದಿನಾಂಕ ನಮೂದಿಸಿದ್ದಾರೆ. ಅಂದರೆ ಸಿದ್ದಲಿಂಗಯ್ಯ ಅವರು ನಿಧನರಾಗುವ ಮುನ್ನವೇ ಶೋಕ ಸಂದೇಶವನ್ನು ಹಿರಿಯ ನಟಿಯೂ ಆದ ಸಚಿವೆ ಉಮಾಶ್ರೀ ಅವರು ತಯಾರು ಮಾಡಿದ್ದಾರೆ. ಆದರೆ, ತಮ್ಮ ಈ `ಭವಿಷ್ಯವಾಣಿ'ಯ ಖದರ್ ಎಲ್ಲರ ಅರಿವಿಗೂ ಬಾರದಿರಲಿ ಎಂದೋ ಏನೋ ಶುಕ್ರವಾರ ಸಂಜೆ ಈ ಶೋಕ ಸಂದೇಶವನ್ನು ಎಲ್ಲ ಮಾಧ್ಯಮಗಳಿಗೂ ಕಳುಹಿಸಿದ್ದಾರೆ. ಪ್ರಜ್ಞಾವಂತೆಯಿಂದ ಇಂಥ ಪ್ರಮಾದವೇ?.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com