ಬೆಂಗಳೂರು: ಅಶೋಕ ನಗರ ರೆಸಿಡೆನ್ಸಿ ರಸ್ತೆಯಲ್ಲಿರುವ ಹೊಟೇಲ್ವೊಂದರ ಕೊಠಡಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರು ಬುಕ್ಕಿಗಳನ್ನು ಬಂಧಿಸಿದ್ದಾರೆ.
ಹೇಮಂತ ಕುಮಾರ್ ಜೈನ್, ಮುಖೇಶ್ ಕುಮಾರ್ ಜೈನ್, ಜಿತೇಂದ್ರ ಜೈನ್ ಹಾಗೂ ಮುಖೇಶ್ ಜೈನ್ ಬಂಧಿತರು. ಆರೋಪಿಗಳಿಂದ ರು.4 ಲಕ್ಷ ನಗದು, 11 ಮೊಬೈಲ್ ಫೋನ್ಗಳು, 2 ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ.
ಬುಕ್ಕಿಗಳಿಗೆ 30 ಪಂಟರ್ಗಳನ್ನು ಹಣ ಕಟ್ಟಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ರಾಜಸ್ಥಾನ ಮೂಲದ ನಾರಾಯಣಗುರು, ಸುರೇಶ್ ಹಾಗೂ ಮಲ್ಹೋತ್ರ ಅವರ ನಿರ್ದೇಶನದಂತೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದುದ್ದಾಗಿ ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆ.
Advertisement