ಶ್ರೀ ಮಾಚಿದೇವರ ಜಯಂತೋತ್ಸವ

ಮಡಿವಾಳರ ಜನಜಾಗೃತಿ ವೇದಿಕೆ ಶ್ರೀ ಮಾಚಿದೇವರ ಜಯಂತೋತ್ಸವವನ್ನು ಮೇ 10 ರಂದು ಬೆಳಿಗ್ಗೆ ಮಂಜನಾಥನಗರದಲ್ಲಿ ಹಮ್ಮಿಕೊಂಡಿದೆ...
ಪತ್ರಿಕಾಗೋಷ್ಠಿ ನಡೆಸಿದ ಮಡಿವಾಳರ ಜನಜಾಗೃತಿ ವೇದಿಕೆ ಸದಸ್ಯರು
ಪತ್ರಿಕಾಗೋಷ್ಠಿ ನಡೆಸಿದ ಮಡಿವಾಳರ ಜನಜಾಗೃತಿ ವೇದಿಕೆ ಸದಸ್ಯರು

ಬೆಂಗಳೂರು: ಮಡಿವಾಳರ ಜನಜಾಗೃತಿ ವೇದಿಕೆ ಶ್ರೀ ಮಾಚಿದೇವರ ಜಯಂತೋತ್ಸವವನ್ನು ಮೇ 10 ರಂದು ಬೆಳಿಗ್ಗೆ ಮಂಜನಾಥನಗರದಲ್ಲಿ ಹಮ್ಮಿಕೊಂಡಿದೆ.

 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್, ಮಾಚಿದೇವರ ಜಯಂತೋತ್ಸವವನ್ನು ಶ್ರೀ ಮಾಚಿದೇವ ಶಿವಯೋಗಾನಂದಪುರಿ ಸ್ವಾಮೀಜಿ ಹಾಗೂ ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳ ಸಾನಿಧ್ಯದಲ್ಲಿ ಆಚರಿಸಲಿದ್ದು, ಕೇಂದ್ರ ಕಾನೂನು ಸಚಿವ ಸದಾನಂದಗೌಡರು ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಈ ಉತ್ಸವದಲ್ಲಿ ಶ್ರೀ ರೇಣುಕಾ ಎಲ್ಲಮ್ಮದೇವಿ, ಶ್ರೀ ಲಕ್ಷ್ಮೀವೆಂಕಟೇಶ್ವರ ದೇವರುಗಳ ಉತ್ಸವ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದ್ದು, ಪ್ರಸಿದ್ಧ ಜಾನಪದ ಕಲಾ ತಂಡಗಳು ಭಾಗವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳ: ರಂಗನಾಥಸ್ವಾಮಿ ಮತ್ತು ಮುನೇಶ್ವರಸ್ವಾಮಿ ದೇವಸ್ಥಾನದ ಹೆಬ್ಬಾಗಿಲು, ಸಿಟಿ ಆಸ್ಪತ್ರೆ ಎದುರು, ಮಂಜುನಾಥನಗರ, ಬೆಂಗಳೂರು 10


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com