'ಬಸವದ್ರೋಹಿಗಳು ' ಎಂದಿಲ್ಲ: ಕಲಬುರ್ಗಿ

ಸೋಮವಾರ ಪ್ರಕಟವಾದ `ಮಠಾಧೀಶರು ಬಸವ ದ್ರೋಹಿಗಳು' ಎಂಬ ಸುದ್ದಿಗೆ ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿಯವರು ..
ಡಾ.ಎಂ.ಎಂ. ಕಲಬುರ್ಗಿ
ಡಾ.ಎಂ.ಎಂ. ಕಲಬುರ್ಗಿ

ಬೆಂಗಳೂರು: ಸೋಮವಾರ ಪ್ರಕಟವಾದ `ಮಠಾಧೀಶರು ಬಸವ ದ್ರೋಹಿಗಳು' ಎಂಬ ಸುದ್ದಿಗೆ ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಯವರು ಸ್ಪಷ್ಟನೆ ನೀಡಿದ್ದಾರೆ. ``ನಾನು ಬಳಸದಿರುವ `ದ್ರೋಹಿ' ಪದವನ್ನು ನನ್ನ ತಲೆಗೆ ಕಟ್ಟಿದುದು ವಿಷಾದದ ಸಂಗತಿ. ನಾನು ಹೇಳಿದ್ದು ಇಷ್ಟು: ಮಠಗಳಲ್ಲಿ ಸ್ವಾಮಿಗಳಿದ್ದಾರೆ, ಬಸವಣ್ಣನಿಲ್ಲ. ಮೊದಲು ಧರ್ಮಕ್ಷೇತ್ರ ದಲ್ಲಿದ್ದ ನಮ್ಮ ಸ್ವಾಮಿಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ನಿರತರಾಗಿ ದ್ದಾರೆ. ಇನ್ನು ಮುಂದೆ ರಾಜಕೀಯ ಕ್ಷೇತ್ರ ಪ್ರವೇಶಿಸಿ ಶಾಸಕ, ಸಂಸದರಾದರೆ ಆಶ್ಚರ್ಯವಿಲ್ಲ- ಎಂದು ಹೇಳಿದ್ದೇನೆ'' ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com