ಹೀರೋ ಆಗಲು ಹೊರಟ ಶಾಸಕ ನಡಹಳ್ಳಿ: ಪಾಪು ತರಾಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ದೇವರಹಿಪ್ಪರಗಿಯ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏಕಾಏಕಿ ಹೀರೋ ಆಗಲು ಹೊರಟಿದ್ದಾರೆಂದು ನಾಡೋಜ...
ಪಾಟೀಲ ಪುಟ್ಟಪ್ಪ (ಸಂಗ್ರಹ ಚಿತ್ರ)
ಪಾಟೀಲ ಪುಟ್ಟಪ್ಪ (ಸಂಗ್ರಹ ಚಿತ್ರ)

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ದೇವರಹಿಪ್ಪರಗಿಯ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏಕಾಏಕಿ ಹೀರೋ ಆಗಲು ಹೊರಟಿದ್ದಾರೆಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹರಿಹಾಯ್ದಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಸಿಟ್ಟು ಹೊರ ಹಾಕಿರುವ ಪಾಪು, ನಡಹಳ್ಳಿ ಶಾಸಕರಾಗುವ ಮೊದಲು ಏನಿದ್ದರು ಎಂಬುದನ್ನು ಅರಿಯಲಿ. ಉತ್ತರ ಕರ್ನಾಟಕವನ್ನು ಸಿಎಂ ಸಿದ್ದರಾಮಯ್ಯ ನಿರ್ಲಕ್ಷಿಸಿರುವರೆಂದು ಬಹುದೊಡ್ದ ರಾಗ ತೆಗೆದು ಹೇಳುತ್ತಾ ರಾಜಕೀಯ ರಂಗಸ್ಥಳದ ಮೇಲೆ ಕಾಣಿಸಿಕೊಳ್ಳಬೇಕೆಂದು ಹೊರಟಿದ್ದಾರೆ. ಈಗ ಎತ್ತಿರುವ ಉತ್ತರ ಕರ್ನಾಟಕವು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವ ಮಾತನ್ನು ಶಾಸಕ ಸಭೆಯಲ್ಲಿ ಎಂದೂ ಎತ್ತಲಿಲ್ಲ. ಅವರ ಬಾಯಲ್ಲಿ ಆಗಾಗ ಪ್ರತ್ಯೇಕ ರಾಜ್ಯದ ಧ್ವನಿಯು ಕೇಳಿ ಬರುತ್ತಿದೆ. ರಾಜ್ಯವನ್ನು ಒಡೆಯುವುದಕ್ಕೆ ಬಹುದೊಡ್ಡ ಶಕ್ತಿ ಬೇಕಾಗಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com