ಮೈಸೂರು: ಅನಾರೋಗ್ಯಪೀಡಿತ ಆನೆಗಳ ಮೇಲೆ ಅರಮನೆ ಆವರಣದಲ್ಲಿ ಸವಾರಿ ಮಾಡಿಸಬಾರದು ಎಂದು ಅರಣ್ಯಸಂರಕ್ಷಣಾಧಿಕಾರಿ ಡಾ.ವಿ. ಕರಿಕಾಳನ್ ಅವರು ಮೈಸೂರು ರಾಜವಂಶಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ರಾಜಮನೆತನದವರು ಅರಮನೆ ಆವರಣದಲ್ಲಿ ಆರು ಆನೆಗಳನ್ನು ಸಾಕಿದ್ದಾರೆ. ಅವುಗಳಲ್ಲಿ ಎರಡು ಅನಾರೋಗ್ಯ ಪೀಡಿತವಾಗಿದೆ. ಗಾಯಗಳಿಂದ ಬಳಲುತ್ತಿರುವ ಆ ಆನೆಗಳ ಮೇಲೆ ಪ್ರವಾಸಿಗರ ಸವಾರಿ ಬೇಡ ಎಂದು ನೋಟಿಸ್ನಲ್ಲಿ ಸಲಹೆ ಮಾಡಿದ್ದಾರೆ.
ಅದರಂತೆ, ಆ ಎರಡು ಆನೆಗಳ ಮೇಲೆ ಸವಾರಿ ಮಾಡಿಸುವುದಿಲ್ಲ ಎಂದು ಅರಮನೆಯ ಮೂಲಗಳು ತಿಳಿಸಿವೆ. ರಾಜಮನೆತನದವರು ನಿಗದಿತ ಶುಲ್ಕ ವಸೂಲಿ ಮಾಡುವ ಮೂಲಕ ಪ್ರವಾಸಿಗರಿಗೆ ಖಾಸಗಿ ಮ್ಯೂಸಿಯಂ ವೀಕ್ಷಣೆಯ ಜತೆಗೆ ಆನೆ ಮತ್ತು ಒಂಟೆ ಸವಾರಿ ಮಾಡಿಸುತ್ತಾರೆ.
Advertisement