ಅನಾರೋಗ್ಯಪೀಡಿತ ಆನೆಗಳ ಸವಾರಿ ಬೇಡ

ಅನಾರೋಗ್ಯಪೀಡಿತ ಆನೆಗಳ ಮೇಲೆ ಅರಮನೆ ಆವರಣದಲ್ಲಿ ಸವಾರಿ ಮಾಡಿಸಬಾರದು ಎಂದು ಅರಣ್ಯಸಂರಕ್ಷಣಾಧಿಕಾರಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮೈಸೂರು: ಅನಾರೋಗ್ಯಪೀಡಿತ ಆನೆಗಳ ಮೇಲೆ ಅರಮನೆ ಆವರಣದಲ್ಲಿ ಸವಾರಿ ಮಾಡಿಸಬಾರದು ಎಂದು ಅರಣ್ಯಸಂರಕ್ಷಣಾಧಿಕಾರಿ ಡಾ.ವಿ. ಕರಿಕಾಳನ್ ಅವರು ಮೈಸೂರು ರಾಜವಂಶಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಜಮನೆತನದವರು ಅರಮನೆ ಆವರಣದಲ್ಲಿ ಆರು ಆನೆಗಳನ್ನು ಸಾಕಿದ್ದಾರೆ. ಅವುಗಳಲ್ಲಿ ಎರಡು ಅನಾರೋಗ್ಯ ಪೀಡಿತವಾಗಿದೆ. ಗಾಯಗಳಿಂದ ಬಳಲುತ್ತಿರುವ ಆ ಆನೆಗಳ ಮೇಲೆ ಪ್ರವಾಸಿಗರ ಸವಾರಿ ಬೇಡ ಎಂದು ನೋಟಿಸ್‍ನಲ್ಲಿ ಸಲಹೆ ಮಾಡಿದ್ದಾರೆ.

ಅದರಂತೆ, ಆ ಎರಡು ಆನೆಗಳ ಮೇಲೆ ಸವಾರಿ ಮಾಡಿಸುವುದಿಲ್ಲ ಎಂದು ಅರಮನೆಯ ಮೂಲಗಳು ತಿಳಿಸಿವೆ. ರಾಜಮನೆತನದವರು ನಿಗದಿತ ಶುಲ್ಕ ವಸೂಲಿ ಮಾಡುವ ಮೂಲಕ ಪ್ರವಾಸಿಗರಿಗೆ ಖಾಸಗಿ ಮ್ಯೂಸಿಯಂ ವೀಕ್ಷಣೆಯ ಜತೆಗೆ ಆನೆ ಮತ್ತು ಒಂಟೆ ಸವಾರಿ ಮಾಡಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com