ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಭಾರತೀಯ ವೈದ್ಯಕೀಯ ಸಂಘ 'ಸ್ವಚ್ಛಭಾರತ-ಸ್ವಸ್ಥ ಭಾರತ' ಅಭಿಯಾನವನ್ನು ಶನಿವಾರ ಮೇ 23ರಂದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ...
ಪತ್ರಿಕಾಗೋಷ್ಠಿ ನಡೆಸಿದ ಡಾ.ಸೋಮೇಶ್ವರ್, ಡಾ.ಹೊನ್ನೇಗೌಡ ಹಾಗೂ ಡಾ.ಉಮಾ ಶೇಷಗಿರಿ
ಪತ್ರಿಕಾಗೋಷ್ಠಿ ನಡೆಸಿದ ಡಾ.ಸೋಮೇಶ್ವರ್, ಡಾ.ಹೊನ್ನೇಗೌಡ ಹಾಗೂ ಡಾ.ಉಮಾ ಶೇಷಗಿರಿ

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘ 'ಸ್ವಚ್ಛಭಾರತ-ಸ್ವಸ್ಥ ಭಾರತ' ಅಭಿಯಾನವನ್ನು ಶನಿವಾರ ಮೇ 23ರಂದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯರಾದ ಡಾ. ಸೋಮೇಶ್ವರ ಅವರು, ಸಾರ್ವಜನಿಕ ನೈರ್ಮಲ್ಯದ ಮಹತ್ವವನ್ನು ಸಾರ್ವಜನಿಕರಲ್ಲಿ ಮೂಢಿಸಲು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ಆಯೋಜಿಸಿದೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯವಾಗಿದ್ದು, ಇದರ ಬಗ್ಗೆ ಹೆಚ್ಚು ಜನರಿಗೆ ಅರಿವು ಇರುವುದಿಲ್ಲ. ಚೈನ್ನಾಗಿ ಕೈಗಳನ್ನು ತೊಳೆದುಕೊಂಡರೆ ಕರುಳು ಹುಳುಗಳು, ಟೈಫಾಯ್ಡ್, ಆಮಶಂಕೆ, ಕಾಲರ, ಕಾಮಾಲೆ ಮುಂತಾದವು ಇತರರಿಗೆ ಹರಡದಂತೆ ತಡೆಯಬಹುದು. ಶನಿವಾರ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸ್ವಚ್ಛತೆಯನ್ನು ಪರಿಪಾಲಿಸುವುದರ ಮೂಲಕ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಉಮಾ ಶೇಷಗಿರಿ, ಡಾ.ಹೊನ್ನೇಗೌಡ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com