ಗಿರೀಶ್ ಕಾರ್ನಾಡ್ ಜ್ಞಾನಪೀಠ ಪ್ರಶಸ್ತಿ ವಾಪಸ್ ನೀಡಬೇಕು: ಪ್ರಮೋದ್ ಮುತಾಲಿಕ್

ಗಿರೀಶ್ ಕಾರ್ನಾಡ್ ಜ್ಞಾನಪೀಠ ಪ್ರಶಸ್ತಿ ವಾಪಸ್ ನೀಡಬೇಕು: ಪ್ರಮೋದ್ ಮುತಾಲಿಕ್ ಕನ್ನಡ ವಿರೋಧಿ ಹೇಳಿಕೆ ನೀಡಿರುವ ಸಾಹಿತಿ ಗಿರೀಶ್ ಕಾರ್ನಾಡ ಜ್ಞಾನನಪೀಠ ಪ್ರಶಸ್ತಿಯನ್ನು ವಾಪಸ್ ನೀಡಬೇಕು
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್

ಹಾಸನ: ಕನ್ನಡ ವಿರೋಧಿ ಹೇಳಿಕೆ ನೀಡಿರುವ ಸಾಹಿತಿ ಗಿರೀಶ್ ಕಾರ್ನಾಡ್ ಜ್ಞಾನನಪೀಠ ಪ್ರಶಸ್ತಿಯನ್ನು ವಾಪಸ್ ನೀಡಬೇಕು ಎಂದು ಶ್ರೀರಾಮಸೇನೆ ಸ್ಥಾಪಕ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಹಾಸನಾಂಬೆಯ ದರ್ಶನ ಪಡೆದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ನಾಡರು ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ.
ಸಾಕಷ್ಟು ಭಾರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಅವರು ಸರ್ಕಾರದ ಪರ ಹೇಳಿಕೆಯನ್ನು ನೀಡುವ ಮೂಲಕ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರೇ ವಿನಹಃ ತಮ್ಮ ಸಾಹಿತ್ಯದಿಂದ ಪ್ರಶಸ್ತಿಯನ್ನು ಪಡೆದಿಲ್ಲ ಎಂದು ಟೀಕಿಸಿದರು. ಟಿಪ್ಪು ಏಕೈಕ ಕನ್ನಡ ಸ್ವಾತಂತ್ರ್ಯ ಹೋರಾಟಗಾರ ಅಂತ ಕಾರ್ನಾಡ್ ಹೇಳಿದ್ದಾರೆ ಹಾಗಾದರೆ ಸಂಗೊಳ್ಳಿ ರಾಯಣ್ಣ ಹಾಗೂ ಇತರರು ಸ್ವಾತಂತ್ರ್ಯ ಹೋರಾಟಗಾರರಲ್ಲವೇ  ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com