ಜಯಂತಿ ಆಚರಿಸುವಂತ ಗುಣಗಳು ಟಿಪ್ಪುವಿನಲ್ಲಿ ಇರಲಿಲ್ಲ: ಸುಬ್ರಮಣಿಯನ್ ಸ್ವಾಮಿ

'ಟಿಪ್ಪು ಸುಲ್ತಾನ್ ಪ್ರೆಂಚ್ ಅಧಿಕಾರಿಗಳ ಸೇವಕನಾಗಿದ್ದ, ಆತನ ಜನ್ಮ ದಿನಾಚರಣೆ ಆಚರಿಸುವಷ್ಟು ಅವನಲ್ಲಿ ಒಳ್ಳೆಯ ಮೌಲ್ಯಗಳಿರಲಿಲ್ಲ ಎಂದು ಬಿಜೆಪಿ ನಾಯಕ ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಬೆಂಗಳೂರು: ಟಿಪ್ಪು ಸುಲ್ತಾನ್ ಪ್ರೆಂಚ್ ಅಧಿಕಾರಿಗಳ ಸೇವಕನಾಗಿದ್ದ, ಆತನ ಜನ್ಮ ದಿನಾಚರಣೆ ಆಚರಿಸುವಷ್ಟು ಅವನಲ್ಲಿ ಒಳ್ಳೆಯ ಮೌಲ್ಯಗಳಿರಲಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಟಿಪ್ಪು ಬ್ರಿಟಿಷರ ಜೊತೆ ಹೋರಾಡಿದ ಎಂದು ಆತನ ಬೆಂಬಲಿಗರು ಹೇಳುತ್ತಾರೆ. ಆದರೆ ಆತ ಹೋರಾಡಿದ್ದು ಸ್ವಾತಂತ್ರ್ಯಕ್ಕಲ್ಲ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆತ ಬ್ರಿಟಿಷರ ಜೊತೆ ಹೋರಾಡಿದ.  ಆತನೊಬ್ಬ ಫ್ರೆಂಚರ ಸೇವಕ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಸರ್ಕಾರ ನವೆಂಬರ್ 10 ನೇ ತಾರೀಖಿನಂದು ಟಿಪ್ಪು ಜಯಂತಿ ಆಚರಿಸಿದ ಹಿನ್ನೆಲೆಯಲ್ಲಿ , ಹೇಳಿಕೆ ನೀಡಿರುವ ಸುಬ್ರಮಣಿಯನ್ ಸ್ವಾಮಿ, ನೆಪೋಲಿಯನ್ ಆಫ್ರಿಕಾದಿಂದ ಭಾರತಕ್ಕೆ ಬಂದು ಯುದ್ದ ಮಾಡಲು ಸಿದ್ದನಿದ್ದ. ಆದರೆ ಆ ವೇಳೆ ಫ್ರೆಂಚರ ಜೊತೆ ಮೈತ್ರಿ ಮಾಡಿಕೊಂಡ ಟಿಪ್ಪು ಸುಲ್ತಾನ್ ಬ್ರಿಟಿಷಯ ವಿರುದ್ಧ ಹೋರಾಡಲು ಫ್ರೆಚರಿಗೆ ನೆರವು ನೀಡಿದ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com