ಮೈಸೂರು: ಹುಲಿ ದಾಳಿಗೆ ದನಗಾಹಿ ಶಿವಣ್ಣ ಬಲಿ

ಹುಲಿಯೊಂದು ದನ ಮೇಯಿಸುತ್ತಿದ್ದ ವ್ಯಕ್ತಿಯನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಮಂಗಳವಾರ ಮೈಸೂರಿನ...
ಮೃತ ಶಿವಣ್ಣ
ಮೃತ ಶಿವಣ್ಣ

ಮೈಸೂರು: ಹುಲಿಯೊಂದು ದನ ಮೇಯಿಸುತ್ತಿದ್ದ ವ್ಯಕ್ತಿಯನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಮಂಗಳವಾರ ಮೈಸೂರಿನ ಎಚ್ ಡಿ ಕೋಟೆಯ ಹಾದನೂರು ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ದನಗಾಹಿ ಶಿವಣ್ಣ(50) ಎಂದು ಗುರುತಿಸಲಾಗಿದ್ದು, ದನ ಮೇಯಿಸಲು ಹೋದ ಸಂದರ್ಭದಲ್ಲಿ ಹುಲಿ ಅವರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಈ ವೇಳೆ ಶಿವಣ್ಣನನ್ನು ರಕ್ಷಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

ಹುಲಿ ಶಿವಣ್ಣನ ದೇಹವನ್ನು ಸುಮಾರು 100 ಮೀಟರ್‌ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದ್ದು, ಭಾಗಶಃ ತಿಂದು ಹಾಕಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ನಂಜದೇವರ ಬೆಟ್ಟದ ಸಮೀಪದ ಕಳ್ಳಂಜಪ್ಪನ ಗುಡಿ ಪಕ್ಕದಲ್ಲಿ ಮೃತ ಶಿವಣ್ಣನಿಗೆ 4.5ಎಕರೆ ಜಮೀನಿದ್ದು ಆ ಜಮೀನಿನಲ್ಲಿ ಹುರುಳಿ, ಹತ್ತಿ, ರಾಗಿ ಬೆಳೆಯನ್ನು ಬೆಳೆದಿದ್ದರು. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com