ಶಿವಮೊಗ್ಗ: ಬಾಲಿವುಡ್ ನಟ ಆಮೀರ್ಖಾನ್ ವಿರುದ್ಧ ಸಾಗರದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶುಕ್ರವಾರ ಖಾಸಗಿ ದೂರು ದಾಖಲಾಗಿದೆ. ಸಾಗರದ ಶ್ರೀಕರ ಭಟ್ ಎಂಬುವರು ದೂರು ದಾಖಲಿಸಿದ್ದು, ನ್ಯಾಯಾಧೀಶರು ಪ್ರಕರಣವನ್ನು ಸಾಗರ ಟೌನ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಆಮೀರ್ ಖಾನ್ ಅವರು ದೇಶ ಬಿಟ್ಟು ಹೋಗುತ್ತೇನೆ ಎನ್ನುವ ಮೂಲಕ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತಂದಿದ್ದಾರೆ. ಅಸಹಿಷ್ಣುತೆಗೆ
ಅವರೂ ಕಾರಣರಾ ಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
Advertisement