ಆಸ್ತಿಗಾಗಿ ಅಣ್ಣನನ್ನೇ ಮುಗಿಸಿದ ತಮ್ಮ

ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಧಾರವಾಡ: ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ ಗ್ರಾಮದಲ್ಲಿ ಜರುಗಿದೆ. 
ಈರಪ್ಪ ದೇಶಣ್ಣವರ (51) ಮೃತ ವ್ಯಕ್ತಿ. ಕೊಲೆ ತಾನೇ ಮಾಡಿದ್ದು ಎಂದು ಶೇಖಪ್ಪ ಒಪ್ಪಿಕೊಂಡಿದ್ದಾನೆ. ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ 20 ವರ್ಷಗಳಿಂದ ಈ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ. 
ಆಸ್ತಿ ವಿಚಾರವಾಗಿ ಗ್ರಾಪಂನಲ್ಲಿ ರಾಜಿ ಸಂಧಾನವಾಗಿದ್ದರೂ, ಮರಳಿ ಮನೆಗೆ ಬಂದಾಗ ಸೈಕಲ್ ಚೈನ್ ನಿಂದ ಶೇಖಪ್ಪನ ಮೇಲೆ ಅಣ್ಣ ಹಲ್ಲೆ ಮಾಡಿದ್ದಾನೆ. 
ಈ ವೇಳೆ ಶೇಖಪ್ಪ ಮತ್ತು ಆತನ ಮಗ ಸೇರಿ ಈರಪ್ಪನನ್ನು ಚೈನ್ ಸುತ್ತಿಸಿ ನೆಲಕ್ಕೆ ಕೆಡವಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಈ ವೇಳೆ ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com