ಎಲ್ಲೆಡೆ ಹೆಚ್ಚುತ್ತಿದೆ ಇಂಟರ್ನೆಟ್ ಗೂಂಡಾಗಿರಿ: ದಿನೇಶ್ ಅಮೀನ್ ಮಟ್ಟು

ಸಾಮಾಜಿಕ ಜಾಲತಾಣದಲ್ಲಿ ಬುಲ್ಲಿಂಗ್ (ಗುದ್ದುವ) ಗೂಂಡಾಗಿರಿ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು...
ವೆಬ್ ಮ್ಯಾಗಜಿನ್ ಅನ್ನು ರಂಗಕರ್ಮಿ ಪ್ರಸನ್ನ, ಕವಿ ಡಾ.ಎಲ್.ಹನುಮಂತಯ್ಯ, ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಲೋಕಾರ್ಪಣೆ ಮಾಡಿದರು.
ವೆಬ್ ಮ್ಯಾಗಜಿನ್ ಅನ್ನು ರಂಗಕರ್ಮಿ ಪ್ರಸನ್ನ, ಕವಿ ಡಾ.ಎಲ್.ಹನುಮಂತಯ್ಯ, ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಲೋಕಾರ್ಪಣೆ ಮಾಡಿದರು.
Updated on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬುಲ್ಲಿಂಗ್ (ಗುದ್ದುವ) ಗೂಂಡಾಗಿರಿ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅನಿಕೇತನ ಸಂಸ್ಥೆಯು ಆರಂಭಿಸಿದ www.aniketana.org ವೆಬ್ ಮಾ್ಯಗಜಿನ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಬಳಕೆ ಬಹಳ ದುರುಪಯೋಗವಾಗುತ್ತಿದೆ.

ಉದ್ದೇಶಪೂರ್ವಕವಾಗಿಯೇ ಒಬ್ಬರನ್ನು ಟಾರ್ಗೆಟ್ ಮಾಡುವ, ಕೆಟ್ಟದಾದ ಭಾಷೆ ಬಳಸುವ ವರ್ಗ ಹೆಚ್ಚಾಗುತ್ತಿದೆ. ಹಿಂದೊಮ್ಮೆ ಕವಿತಾ ಕೃಷ್ಣ ಅವರನ್ನು `ರಂಡಿ' ಎಂದು ಕರೆದಿದ್ದಕ್ಕೆ, ಕವಿತಾ ಅವರು ರಂಡಿ ಎಂದರೆ ಬೇಜಾರಿಲ್ಲ. ಆದರೆ `ಸಂಘಿ' ಎಂದು ಕರೆಯಬೇಡಿ ಎಂದು ಟಾಂಗ್ ನೀಡಿದ್ದರು. ಆದಾದ ಮೇಲೆ ಅಟ್ಯಾಕ್ ಮಾಡುವುದು ಸ್ವಲ್ಪ ಕಡಿಮೆಯಾಯಿತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com