ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬುಲ್ಲಿಂಗ್ (ಗುದ್ದುವ) ಗೂಂಡಾಗಿರಿ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.
ಅನಿಕೇತನ ಸಂಸ್ಥೆಯು ಆರಂಭಿಸಿದ www.aniketana.org ವೆಬ್ ಮಾ್ಯಗಜಿನ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಬಳಕೆ ಬಹಳ ದುರುಪಯೋಗವಾಗುತ್ತಿದೆ.
ಉದ್ದೇಶಪೂರ್ವಕವಾಗಿಯೇ ಒಬ್ಬರನ್ನು ಟಾರ್ಗೆಟ್ ಮಾಡುವ, ಕೆಟ್ಟದಾದ ಭಾಷೆ ಬಳಸುವ ವರ್ಗ ಹೆಚ್ಚಾಗುತ್ತಿದೆ. ಹಿಂದೊಮ್ಮೆ ಕವಿತಾ ಕೃಷ್ಣ ಅವರನ್ನು `ರಂಡಿ' ಎಂದು ಕರೆದಿದ್ದಕ್ಕೆ, ಕವಿತಾ ಅವರು ರಂಡಿ ಎಂದರೆ ಬೇಜಾರಿಲ್ಲ. ಆದರೆ `ಸಂಘಿ' ಎಂದು ಕರೆಯಬೇಡಿ ಎಂದು ಟಾಂಗ್ ನೀಡಿದ್ದರು. ಆದಾದ ಮೇಲೆ ಅಟ್ಯಾಕ್ ಮಾಡುವುದು ಸ್ವಲ್ಪ ಕಡಿಮೆಯಾಯಿತು ಎಂದರು.
Advertisement