ಹೀರೆಮಠ್ ರಾಜ್ಯಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ...!

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ಅವರು ನಮ್ಮ ರಾಜ್ಯದ ರಾಜ್ಯಪಾಲರಲ್ಲ ಅಥವಾ ರಾಷ್ಟ್ರಪತಿಗಳೂ ಅಲ್ಲ. ...
ಕೆ.ಜೆ ಜಾರ್ಜ್
ಕೆ.ಜೆ ಜಾರ್ಜ್
Updated on

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ಅವರು ನಮ್ಮ ರಾಜ್ಯದ ರಾಜ್ಯಪಾಲರಲ್ಲ ಅಥವಾ ರಾಷ್ಟ್ರಪತಿಗಳೂ ಅಲ್ಲ. ಹೀಗಿರುವಾಗ ನಾನು ಅವರ ಪ್ರಶ್ನೆಗಳಿಗೆ ಏಕೆ ಉತ್ತರಿಸಬೇಕು ಎಂದು ಗೃಹ ಸಚಿವ ಜಾರ್ಜ್ ಕಿಡಿ ಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ನಾಯಕರೂ ಕಳಂಕಿತರಾಗಿದ್ದು, ಐವರು ಸಚಿವರನ್ನು ಮನೆಗೆ ಕಳುಹಿಸಿ ಎಂದು ನಿಮ್ಮ ಹೆಸರನ್ನೂ ಕೂಡ ಹಿರೇಮಠ್ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರೇಮಠ್ ರಾಜ್ಯದ 6.5 ಕೋಟಿ ಜನರಂತೆ ಓರ್ವ ಸಾಮಾನ್ಯ ವ್ಯಕ್ತಿ ಅಷ್ಟೇ. ಅವರು ರಾಜ್ಯಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ. ಅಲ್ಲದೆ ನನ್ನ ವಿರುದ್ಧ ಹೇಳಿಕೆ ನೀಡದಂತೆ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಹೀಗಿರುವಾಗ ಅವರು ಕೋರ್ಟ್ ಆದೇಶವನ್ನೂ ಪಾಲಿಸದೇ ನನ್ನ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಂಡಾಮಂಡಲವಾದರು.

ರಾಜ್ಯ ಸರ್ಕಾರದ ಸಂಪುಟದಲ್ಲಿರುವ ಐವರು ಸಚಿವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರೇ ನಿಮಗೆ ಧೈರ್ಯವಿದ್ದಲ್ಲಿ ಅವರನ್ನು ಕೂಡಲೇ ಮನೆಗೆಕಳುಹಿಸಿ, ಸಂತೋಷ್ ಲಾಡ್ ಇಲಿಯಾದರೆ ಇವರೆಲ್ಲರೂ ಹೆಗ್ಗಣಗಳು ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com