ಮುಂದುವರಿದ ಹೋರಾಟ: ಗದಗ ಜಿಲ್ಲೆಯ ನರಗುಂದದಲ್ಲಿ 82 ದಿನಗಳಿಂದ ನಡೆಯುತ್ತಿರುವ ಮಹದಾಯಿ, ಕಳಸಾ-ಬಂಡೂರಿ ಹೋರಾಟಕ್ಕೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತಿಭಟನೆ, ಪಾದಯಾತ್ರೆ, ಬಂದ್, ಚಳವಳಿ, ಚಕ್ಕಡಿ ಯಾತ್ರೆ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗದಗನಲ್ಲಿ ಕರ್ನಾಟಕ ನವನಿರ್ಮಾಣ ವೇದಿಕೆಯ ಕಾರ್ಯಕರ್ತರು ಹಾಗೂ ರೈತರು ಚಕ್ಕಡಿ ಚಳವಳಿ ನಡೆಸಿದರು. ಡಂಬಳ ಗ್ರಾಮದಲ್ಲಿನ ರೈತರು ಹಾಗೂ ಹೋರಾಟಗಾರರು ಡಂಬಳ ಗ್ರಾಮವ ನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಕಳಸಾ-ಬಂಡೂರಿ, ಮಹದಾಯಿಗೆ ಬೆಂಬಲಿಸಿದರು. ಲಕ್ಷ್ಮೇಶ್ವರದ ನೂರಾರು ರೈತರು ಹಾಗೂ ಪ್ರಗತಿಪರ ಚಿಂತಕರು ಲಕ್ಷ್ಮೇಶ್ವರದಿಂದ ನರಗುಂದಕ್ಕೆ ತೆರಳಿ ಹೋರಾಟಕ್ಕೆ ಬೆಂಬಲಿಸಿದರು. ರೋಣ ತಾಲೂಕಿನ ಜಕ್ಕಲಿ ಗ್ರಾಮದ