ಪಾಷಣದಿಂದ ಹಲ್ಲುಜ್ಜಿ ಮಹಿಳೆ ಸಾವು

ಟೂತ್‍ಪೇಸ್ಟ್ ಎಂದು ತಿಳಿದು ಇಲಿ ಪಾಷಣದಿಂದ ಹಲ್ಲು ಉಜ್ಜಿ ಅಸ್ವಸ್ಥರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಟೂತ್‍ಪೇಸ್ಟ್ ಎಂದು ತಿಳಿದು ಇಲಿ ಪಾಷಣದಿಂದ ಹಲ್ಲು ಉಜ್ಜಿ ಅಸ್ವಸ್ಥರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 
ಮೈಸೂರು ತಾಲೂಕು ಮೆಲ್ಲಹಳ್ಳಿ ನಿವಾಸಿ ಕೃಷ್ಣ ಎಂಬವರ ಪತ್ನಿ ಹೇಮಾವತಿ (35) ಮೃತಪಟ್ಟವರು. ಇವರು ಮನೆಯಲ್ಲಿದ್ದ ಇಲಿ ಪಾಷಣವನ್ನು ಟೂತ್‍ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿ ಅಸ್ವಸ್ಥರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈಗ ಇಲಿ ಪಾಷಣವು ಟೂತ್‍ಪೇಸ್ಟ್ ಮಾದರಿಯಲ್ಲಿ ಬರುತ್ತಿದ್ದು, ಇಲಿಗಳ ಕಾಟ ನಿಯಂತ್ರಿಸಲು ಬಚ್ಚಲು ಮನೆಗಳಲ್ಲಿ ಈ ಪಾಷಣವನ್ನು ಇರಿಸಲಾಗುತ್ತಿದೆ. ಮುಂಜಾನೆ ಎದ್ದೇಳುವ ಮಹಿಳೆಯರು ಟೂತ್‍ಪೇಸ್ಟ್ ಎಂದು ತಿಳಿದು ಇಲಿ ಪಾಷಣವನ್ನು ಹಾಕಿ ಹಲ್ಲು ಉಜ್ಜಿ ಅಸ್ವಸ್ಥರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com