ಮತ್ತೆ 26 ಪ್ರಕರಣ ಬಾಯ್ಬಿಟ್ಟ ಇರಾನಿ ಗ್ಯಾಂಗ್

ಉದ್ಯಾನ ನಗರಿ ಮಹಿಳೆಯರನ್ನು ಬೆಚ್ಚಿ ಬೀಳಿಸಿದ್ದ ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು...
ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್
ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್
Updated on
ಬೆಂಗಳೂರು: ಉದ್ಯಾನ ನಗರಿ ಮಹಿಳೆಯರನ್ನು ಬೆಚ್ಚಿ ಬೀಳಿಸಿದ್ದ ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. 
ಇದರಿಂದಾಗಿ ಮತ್ತೆ 26 ಪ್ರಕರಣಗಳನ್ನು ಪತ್ತೆ ಮಾಡಿ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಇರಾನಿ ಗ್ಯಾಂಗ್ ಒಂದೇ ತಂಡದಿಂದ ಒಂದು ತಿಂಗಳ ಅವಧಿಯಲ್ಲಿ ರು.70 ಲಕ್ಷ ಮೌಲ್ಯದ ಎರಡೂವರೆ ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಂತಾಗಿದೆ. ಸಿಸಿಬಿ ಸಂಘಟಿತ ಅಪರಾಧ ದಳ ಅಧಿಕಾರಿಗಳ ತಂಡ ಸೆಪ್ಟೆಂಬರ್ 21ರಂದು ಕಾರ್ಯಾಚರಣೆ ನಡೆಸಿ ಧಾರವಾಡದ ಜನ್ನತ್ ನಗರ ಇರಾನಿ ಕಾಲೋನಿಯ ಅಬುಜರ್ ಅಲಿ (26), ಅಬುಲ್ ಹಸನ್ (23) ಹಾಗೂ ಚಿನ್ನಾಭರಣ ಸ್ವೀಕರಿಸುತ್ತಿದ್ದ. 
ಹಾಸನದ ಹೊಳೆನರಸಿಪುರ ಟೌನ್ ನ ಗಿರೀಶ್ ರಾಜೇಗೌಡ ಅಲಿಯಾಸ್ ಬಾಂಬೆ ಗಿರೀಶ್(38)ನನ್ನು ಬಂಧಿಸಿದ್ದರು. ಬಂಧಿತರಿಂದ 2013ರಿಂದ 2015ರ ಸಾಲಿನಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ 41 ಸರ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ರು.60 ಲಕ್ಷ ಮೌಲ್ಯದ 2 ಕೆಜಿ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಪ್ಪು ಬಣ್ಣದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದರು. 
ಆದರೆ, ಈ ತಂಡ ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಆರೋಪಿ ಅಬುಜರ್ ಅಲಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಆಗ ಮತ್ತೆ ನಗರ ವ್ಯಾಪ್ತಿಯಲ್ಲಿ ನಡೆದಿದ್ದ 26 ಪ್ರಕರಣಗಳು ಪತ್ತೆಯಾಗಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.
ಆರೋಪಿ ಅಬುಜರ್ ನಗರದಲ್ಲಿ ಮಾಡಿದ್ದ ಚಿನ್ನಾಭರಣಗಳನ್ನು ಧಾರವಾಡದ ಪಾನ್ ಬ್ರೋಕರ್ಸ್ ಬಳಿ ಅಡ ಇಟ್ಟಿದ್ದ. ಆತನ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ತಂಡ ಚಿನ್ನಾಭರಣ ವಶಪಡಿಸಿಕೊಂಡಿದೆ. ಜೈಲಿಗೆ ಬಂದವರಿಂದ ಮಾಹಿತಿ: ಜೈಲಿನಲ್ಲಿದ್ದ ಆರೋಪಿಗಳನ್ನು ಭೇಟಿ ಮಾಡಲು ನಿರಂತರವಾಗಿ ಕೆಲವರು ಬರುತ್ತಿದ್ದರು. ಈ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳ ತಂಡ ಅಬುಜರ್‍ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇನ್ನಷ್ಟು ಪ್ರಕರಣಗಳ ಬಗ್ಗೆ ಬಾಯ್ಬಿಟ್ಟಿದ್ದಾ ನೆಂದು ಪೊಲೀಸರು ಹೇಳಿದರು. 
ಅಬುಜರ್ ವಿರುದ್ಧ ಗೂಂಡಾ ಕಾಯ್ದೆ
ಪ್ರಮುಖ ಆರೋಪಿ ಅಬುಜರ್ ಅಲಿ ಸರ ಕಿತ್ತುಕೊಳ್ಳುವುದರಲ್ಲಿ ಎಕ್ಸ್‍ಪರ್ಟ್ ಆಗಿದ್ದ. ಅಬುಲ್ ಹಸನ್ ಬೈಕ್ ಓಡಿಸುವುದರಲ್ಲಿ ನಿಷ್ಣಾತ. ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಮಹಿಳೆಯರ ಕತ್ತಿಗೆ ಕೈ ಹಾಕುತ್ತಿದ್ದ ಅಬುಜರ್ ಅನಾಯಾಸವಾಗಿ ಸರ ಕಿತ್ತುಕೊಳ್ಳುತ್ತಿದ್ದ. 67 ಪ್ರಕರಣಗಳಲ್ಲಿ ಅಬುಜರ್ ಭಾಗಿಯಾಗಿರುವ ಕಾರಣ ಈತನ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲಾಗುತ್ತದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com