ಲಕ್ಷ ರು. ಪರಿಹಾರ ಚೆಕ್ ವಿತರಣೆ

ಸಣಬದಕೊಪ್ಪಲು ಗ್ರಾಮದ ಮೃತ ರೈತ ಲೋಕೇಶ್ ಪತ್ನಿ ಶೋಭಾ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ್ ಗುರುವಾರ ರು. 1 ಲಕ್ಷ ರು. ಪರಿಹಾರ ಚೆಕ್ ವಿತರಿಸಿದರು.
ರಾಹುಲ್ ಗಾಂಧಿ ಭೇಟಿ ನೀಡಿದ್ದ ರೈತ ಕುಟುಂಬ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ ಭೇಟಿ ನೀಡಿದ್ದ ರೈತ ಕುಟುಂಬ (ಸಂಗ್ರಹ ಚಿತ್ರ)
Updated on

ಪಾಂಡವಪುರ: ಸಣಬದಕೊಪ್ಪಲು ಗ್ರಾಮದ ಮೃತ ರೈತ ಲೋಕೇಶ್ ಪತ್ನಿ ಶೋಭಾ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ್ ಗುರುವಾರ ರು. 1 ಲಕ್ಷ ರು. ಪರಿಹಾರ ಚೆಕ್  ವಿತರಿಸಿದರು.

ಈ ಮೂಲಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಹಿಂದಿರುಗಿದ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ರಾಜಕೀಯ ವಿಷಯವಾಗಿ ರೂಪುಗೊಂಡಿದ್ದ ಚೆಕ್  ರಾಜಕಾರಣಕ್ಕೆ ತೆರೆ ಬಿದ್ದಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಹಾಗೂ ಸ್ಥಳೀಯ ನಾಯಕರೊಂದಿಗೆ ಸಣಬದಕೊಪ್ಪಲು ಗ್ರಾಮದ ಮೃತ  ಲೋಕೇಶ್ ನಿವಾಸಕ್ಕೆ ತೆರಳಿ ಲೋಕೇಶ್ ಪತ್ನಿ ಶೋಭಾರವರ ಕೈಗೆ ಕೆಪಿಸಿಸಿ ನೀಡಿದ್ದ ಪರಿಹಾರ ಚೆಕ್ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ಪತ್ನಿ ಶೋಭ ಅವರಿಗೆ  ಸಾಂತ್ವನ ಹೇಳಿ ಧೈರ್ಯ ತುಂಬಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com