ಪಿಎಸ್ ಐ ಜಗದೀಶ್ ಹತ್ಯೆಗೆ ಆಕ್ರೋಶ: ದೊಡ್ಡಬಳ್ಳಾಪುರ ಬಂದ್

ಪಿಎಸ್ ಐ ಜಗದೀಶ್ ಅವರ ಹತ್ಯೆ ಖಂಡಿಸಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ದೊಡ್ಡಬಳ್ಳಾಪುರ ಬಂದ್ ಗೆ ಕರೆ ನೀಡಿದ್ದಾರೆ...
ಮೃತ ಪಿಎಸ್ ಐ ಜಗದೀಶ್
ಮೃತ ಪಿಎಸ್ ಐ ಜಗದೀಶ್

ಬೆಂಗಳೂರು: ಪಿಎಸ್ ಐ ಜಗದೀಶ್ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಿಎಸ್ ಐ ಹತ್ಯೆಯನ್ನು ಖಂಡಿಸಿ ದೊಡ್ಡಬಳ್ಳಾಪುರ ಬಂದ್ ಗೆ ಕರೆ ನೀಡಿದ್ದಾರೆ.

ಪಿಎಸ್ ಐ ಜಗದೀಶ್ ಅವರು ನಾಲ್ವರು ಪೇದೆಗಳೊಂದಿಗೆ ಬೈಕ್ ಕಳ್ಳರಾದ ಮಧು, ಕೃಷ್ಣರನ್ನು ಚೇಸ್ ಮಾಡಿಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ನೆಲಮಂಗಲದ ಸಮೀಪ ಕಳ್ಳನೊಬ್ಬ ಜಗದೀಶ್ ಅವರ ಎದೆಗೆ ಡ್ರಾಗನ್ ನಿಂದ ಇರಿದು ಸರ್ವಿಸ್ ರಿವಾಲ್ವರ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದ. ಇನ್ನು ಡ್ರಾಗನ್ ಇರಿತದಿಂದ ಗಾಯಗೊಂಡಿದ್ದ ಪೇದೆ ವೆಂಕಟೇಶ್ ಮೂರ್ತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಉತ್ತಮ ಕೆಲಸ ಮಾಡುವ ಮೂಲಕ ಜಗದೀಶ್ ಜನಾನುರಾಗಿಯಾಗಿದ್ದ ಜಗದೀಶ್ ಸಾವಿನಿಂದ ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆದಿದೆ. ಹೀಗಾಗಿ ಸಾರ್ವಜನಿಕರು ರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಗ ಜಗದೀಶ್ ಹತ್ಯೆಯ ಸುದ್ದಿ ಕೇಳಿ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಅವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ನಾಳೆ ಪಿಎಸ್ ಐ ಜಗದೀಶ್ ಅವರ ಅಂತ್ಯಕ್ರಿಯೆ ಮಾಗಡಿ ತಾಲೂಕಿನ ಮಲ್ಲಾಪುರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com