ಶುಕ್ರವಾರ ನಡೆದ ವಲಯ ಜಂಟಿ ಆಯುಕ್ತರ ಸಭೆಯಲ್ಲಿ, ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ, ಹೆಚ್ಚು ಕಸ ಬೀಳುವ ಸ್ಥಳ ಗುರುತಿಸುವುದು, ಒಣ ತ್ಯಾಜ್ಯ ವಿಂಗಡಣೆಯ ಘಟಕ ನಿರ್ವಹಣೆ ಬಗ್ಗೆ ಆಯಾ ಅಧಿಕಾರಿಗಳು ವಿವರಣೆ ನೀಡಿದರು. ಆಯುಕ್ತ ಕುಮಾರ್ ನಾಯಕ್ ಮಾತನಾಡಿ, ಆಯಾ ವಲಯಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡ ಉತ್ತಮ ಪದ್ಧತಿಗಳನ್ನು ಬೇರೆ ವಲಯಗಳಲ್ಲೂ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳ ತಂಡ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸರ್ಕಾರೇತರ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮೂಲದಲ್ಲೇ ಕಸ ವಿಂಗಡಣೆ ಮಾಡಬೇಕು.