ಸಾಹಿತಿಗಳ ವಿರುದ್ಧ ಪಾಪು ಗರಂ

ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಹಾಗೂ ಹಂತಕರ ಬಂಧನದಲ್ಲಾಗುತ್ತಿರುವ ವಿಳಂಬ ಖಂಡಿಸಿ ನಾಡಿನಾದ್ಯಂತ...
ಡಾ. ಪಾಟೀಲ ಪುಟ್ಟಪ್ಪ
ಡಾ. ಪಾಟೀಲ ಪುಟ್ಟಪ್ಪ
Updated on

ಧಾರವಾಡ: ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಹಾಗೂ ಹಂತಕರ ಬಂಧನದಲ್ಲಾಗುತ್ತಿರುವ ವಿಳಂಬ ಖಂಡಿಸಿ ನಾಡಿನಾದ್ಯಂತ ತಾವು ಪಡೆದ ಪದಕ, ಪ್ರಶಸ್ತಿಗಳನ್ನು ಹಿಂದುರಿಗಿಸುತ್ತಿರುವ ಸಾಹಿತಿ, ಲೇಖಕರ ಕುರಿತು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಗುಡುಗಿದ್ದಾರೆ. 

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರ್ಗಿ ಅವರ ಕೊಲೆ ಹಾಗೂ ಬೇರೆ ನಾಲ್ಕೈದು ಜನರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆದಿದ್ದರೂ ಸರ್ಕಾರಗಳು ಯಾವ ಕ್ರಮವನ್ನು ಕೈಗೊಳ್ಳದೇ, ಕೇಂದ್ರ ಸಾಹಿತ್ಯ ಅಕಾಡೆಮಿ ಕೂಡ ಏನನ್ನೂ ಮಾಡದೇ ಮೌನ ಧರಿಸಿರುವುದನ್ನು ಖಂಡಿಸಿ ಈ ಸಾಹಿತಿಗಳು, ಲೇಖಕರು ತಾವು ಪಡೆದ ಪ್ರಶಸ್ತಿ, ಪದಕ ಹಾಗೂ ಬಹುಮಾನಗಳನ್ನು ಹಿಂದಿರುಗಿಸುವ ಶೌರ್ಯದ ಕಾರ್ಯವನ್ನು ಕೈಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 
ತಾವು ಪಡೆದ ಪದಕ ಹಾಗೂ ಪ್ರಶಸ್ತಿಗಳನ್ನು ಹಿಂತಿರುಗಿಸುವ ಪೌರುಷವನ್ನು ತೋರಿಸದೇ, ದೇಶವನ್ನು ಹಾಗೂ ದೇಶದ ಜನರನ್ನು ಎಲ್ಲ ಬಗೆಯ ಭ್ರಷ್ಟಾಚಾರಗಳಿಂದ ಮುಕ್ತಗೊಳಿಸುವ ಹೋರಾಟಗಳಲ್ಲಿ ಭಾಗವಹಿಸಿದರೆ ಅವರ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com