ಭಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

ತಲಕಾವೇರಿಯಲ್ಲಿ ಪ್ರತೀ ವರ್ಷದಂತೆ ಈ ಭಾರಿಯೂ ನಿಗದಿಯಂತೆ ಕಾವೇರಿಯ ಪವಿತ್ರ ತೀಥೋದ್ಭವವಾಗಿದೆ...
ತೀಥೋದ್ಭವ
ತೀಥೋದ್ಭವ
ತಲಕಾವೇರಿ: ತಲಕಾವೇರಿಯಲ್ಲಿ ಪ್ರತೀ ವರ್ಷದಂತೆ ಈ ಭಾರಿಯೂ ನಿಗದಿಯಂತೆ ಕಾವೇರಿಯ ಪವಿತ್ರ ತೀಥೋದ್ಭವವಾಗಿದೆ. 
ಇಂದು ಮುಂಜಾನೆ ಮಿಥುನ ಲಗ್ನದಲ್ಲಿ 12 ಗಂಟೆ 16 ನಿಮಿಷಕ್ಕೆ ಕುಂಡಿಕೆಯಿಂದ ಉಕ್ಕಿ ಬಂದು ತೀರ್ಥೋದ್ಭವ ಕಂಡು ಭಕ್ತರು ಪುನೀತರಾಗಿ ಕಾವೇರಮ್ಮನ ಪಾದಾರವಿಂದಗಳಿಗೆ ಗೋವಿಂದ ಎಂದು ಘೋಷಣೆ ಕೂಗಿದರು.
ಕಾವೇರಿ ತೀಥೋಧ್ಬವ ಆಗುವ ಅರ್ಧಗಂಟೆ ಮುನ್ನ ಕೋಡಿ ಕುಟುಂಬದ ಸದಸ್ಯರು ದೇವರ ಬಂಡಾರವನ್ನು ದೇವಾಲಯಕ್ಕೆ ತರುತ್ತಿದ್ದಂತೆ, ಕುಂಡಿಕೆ ಸುತ್ತಲು ಪ್ರಧಾನ ಅರ್ಚಕರು ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ ಮೂಲಕ ಪೂಜಾ ವಿವಿಧಿವಿಧಾನ ನೆರವೇರಿಸಿದರು.
ಇನ್ನು ಜೀವನದಿ ಕಾವೇರಿಯ ಪವಿತ್ರ ನೀರನ್ನು ಪಡೆಯಲು ನೂರಾರು ಭಕ್ತರು ಮುಗಿಬಿದ್ದರು. ಕೊರೆಯುವ ಚಳಿ ಮಂಜು ಮುಸುಕಿದ ವಾತಾವರಣದಲ್ಲೂ ತಾಯಿಯ ದರ್ಶನ ಪಡೆದು ಭಕ್ತರು ಪುನೀತರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com