ಮೋದಿಯ ಅಚ್ಛೇ ದಿನ್ ಬರಲೇ ಇಲ್ಲ: ವಿಜುಕೃಷ್ಣನ್

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜನರ ಪಾಲಿಗೆ ಅಚ್ಛೇ ದಿನ್ ಬರಲಿಲ್ಲ. ಬದಲಿಗೆ ಬುರಾದಿನ್ (ಕೆಟ್ಟ ದಿನಗಳು) ಬಂದವು. ಇದಕ್ಕೆ ಕಾರಣ ಚುನಾವಣೆ ವೇಳೆ ಅವರು ರೈತರು, ರೈತ ಕೃಷಿಕರ ಪ್ರಗತಿಗೆ ನೀಡಿದ್ದ ಭರವಸೆಗಳನ್ನು...
ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್ (ಸಂಗ್ರಹ ಚಿತ್ರ)
ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜನರ ಪಾಲಿಗೆ ಅಚ್ಛೇ ದಿನ್ ಬರಲಿಲ್ಲ. ಬದಲಿಗೆ ಬುರಾದಿನ್ (ಕೆಟ್ಟ ದಿನಗಳು) ಬಂದವು. ಇದಕ್ಕೆ ಕಾರಣ ಚುನಾವಣೆ
ವೇಳೆ ಅವರು ರೈತರು, ರೈತ ಕೃಷಿಕರ ಪ್ರಗತಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸ ದೇ ಹೊಂದದ್ದು ಎಂದು ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್ ಟೀಕಿಸಿದರು.

ಭಾನುವಾರ `ಕೃಷಿ ಬಿಕ್ಕಟ್ಟು ಮತ್ತು ಪರ್ಯಾಯ ಮಾರ್ಗಗಳು' ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಮೋದಿ ದೇಶಾದ್ಯಂತ 400 ಕಡೆ ಮಾಡಿದ ಭಾಷಣದಲ್ಲಿ ರೈತರಿಗೆ ಹಲವು ಭರವಸೆ ನೀಡಿದ್ದರು. ಯಾವುದೂ ಈಡೇರಿಲ್ಲ ಎಂದು ಟೀಕಿಸಿದರು.

ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕೇಂದ್ರ ಸರ್ಕಾರ ದೇಶದದ ಆಹಾರ ಭದ್ರತೆಯತ್ತ ಗಮನಹರಿಸುತ್ತಿಲ್ಲ. ಟನ್ ಕಬ್ಬಿಗೆ 3,500 ರು. ನಿಗದಿ ಮಾಡುವುದು ಸೂಕ್ತ ಎಂದು ವೈಜ್ಞಾನಿಕವಾಗಿ ಹೇಳಿದರೂ ಕ್ರಮ ಜರುಗಿಸಲಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com