ಸಚಿವ ಅಭಯ ಚಂದ್ರ ಜೈನ್ ಗೆ ರವಿ ಪೂಜಾರಿಯಿಂದ ಕೊಲೆ ಬೆದರಿಕೆ

ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ಶನಿವಾರ ಮಧ್ಯಾಹ್ನ ರವಿ ಪೂಜಾರಿ ಎಂಬ ಹೆಸರಿನಲ್ಲಿ ಜೀವಬೆದರಿಕೆ ಕರೆ ಬಂದಿದೆ....
ಅಭಯ ಚಂದ್ರ ಜೈನ್
ಅಭಯ ಚಂದ್ರ ಜೈನ್

ಮೂಡುಬಿದಿರೆ: ರಾಜ್ಯ ಕ್ರೀಡಾ ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ಶನಿವಾರ ಮಧ್ಯಾಹ್ನ ರವಿ ಪೂಜಾರಿ ಎಂಬ ಹೆಸರಿನಲ್ಲಿ  ಜೀವಬೆದರಿಕೆ ಕರೆ ಬಂದಿದೆ.

ಶನಿವಾರ ಮಧ್ಯಾಹ್ನ 12.39ರ ವೇಳೆಗೆ +5065 ಇಂಟರ್‍ನೆಟ್ ಕಾಲ್ ನಂಬರ್ ಮುಖಾಂತರ ಅಭಯಚಂದ್ರ ಜೈನ್‍ಗೆ ಕರೆ ಮಾಡಿದ ವ್ಯಕ್ತಿ `ತಾನು ರವಿ ಪೂಜಾರಿ ಮಾತನಾಡುವುದು. ನೀನು ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೀಯ. ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡಿದ್ದಾನೆ.

ನಾನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಅಭಯಚಂದ್ರ ಜೈನ್ ಹೇಳಿದಾಗ, `ಇಲ್ಲ ನೀನು ಹಾಗೂ ರಮಾನಾಥ ರೈ ಇಬ್ಬರೂ ಭಾಗಿಯಾಗಿದ್ದೀರಿ ಎಂದು ಮರು ಉತ್ತರಿಸಿದ್ದಾನೆ. ಕರೆ ಮಾಡಿದ ವ್ಯಕ್ತಿಯು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಜೈನ್ ಜೊತೆ ಸಂಭಾಷಣೆ ಮಾಡಿದ್ದಾನೆ. ಸಚಿವರು ಪೊಲೀಸರಿಗೆ ಸಂಜೆ ದೂರು ನೀಡಿದ್ದಾರೆ.

ಭದ್ರತೆ:
ಅಭಯಚಂದ್ರ ಜೈನ್ ಬೆದರಿಕೆ ಕುರಿತು ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದು, ದ.ಕ ಜಿಲ್ಲಾ ಪೊಲೀಸ್ ಕಮೀಷನರ್ ಮುರುಗನ್ ಸಂಜೆ ವೇಳೆ ಸಚಿವರ ಮನೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಬೆದರಿಕೆ ಹಿನ್ನಲೆಯಲ್ಲಿ ಸಚಿವರ ಮನೆಗೆ ಭದ್ರತೆಯನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com