ಸಚಿವ ಅಭಯ ಚಂದ್ರ ಜೈನ್ ಗೆ ರವಿ ಪೂಜಾರಿಯಿಂದ ಕೊಲೆ ಬೆದರಿಕೆ

ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ಶನಿವಾರ ಮಧ್ಯಾಹ್ನ ರವಿ ಪೂಜಾರಿ ಎಂಬ ಹೆಸರಿನಲ್ಲಿ ಜೀವಬೆದರಿಕೆ ಕರೆ ಬಂದಿದೆ....
ಅಭಯ ಚಂದ್ರ ಜೈನ್
ಅಭಯ ಚಂದ್ರ ಜೈನ್
Updated on

ಮೂಡುಬಿದಿರೆ: ರಾಜ್ಯ ಕ್ರೀಡಾ ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ಶನಿವಾರ ಮಧ್ಯಾಹ್ನ ರವಿ ಪೂಜಾರಿ ಎಂಬ ಹೆಸರಿನಲ್ಲಿ  ಜೀವಬೆದರಿಕೆ ಕರೆ ಬಂದಿದೆ.

ಶನಿವಾರ ಮಧ್ಯಾಹ್ನ 12.39ರ ವೇಳೆಗೆ +5065 ಇಂಟರ್‍ನೆಟ್ ಕಾಲ್ ನಂಬರ್ ಮುಖಾಂತರ ಅಭಯಚಂದ್ರ ಜೈನ್‍ಗೆ ಕರೆ ಮಾಡಿದ ವ್ಯಕ್ತಿ `ತಾನು ರವಿ ಪೂಜಾರಿ ಮಾತನಾಡುವುದು. ನೀನು ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೀಯ. ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡಿದ್ದಾನೆ.

ನಾನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಅಭಯಚಂದ್ರ ಜೈನ್ ಹೇಳಿದಾಗ, `ಇಲ್ಲ ನೀನು ಹಾಗೂ ರಮಾನಾಥ ರೈ ಇಬ್ಬರೂ ಭಾಗಿಯಾಗಿದ್ದೀರಿ ಎಂದು ಮರು ಉತ್ತರಿಸಿದ್ದಾನೆ. ಕರೆ ಮಾಡಿದ ವ್ಯಕ್ತಿಯು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಜೈನ್ ಜೊತೆ ಸಂಭಾಷಣೆ ಮಾಡಿದ್ದಾನೆ. ಸಚಿವರು ಪೊಲೀಸರಿಗೆ ಸಂಜೆ ದೂರು ನೀಡಿದ್ದಾರೆ.

ಭದ್ರತೆ:
ಅಭಯಚಂದ್ರ ಜೈನ್ ಬೆದರಿಕೆ ಕುರಿತು ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದು, ದ.ಕ ಜಿಲ್ಲಾ ಪೊಲೀಸ್ ಕಮೀಷನರ್ ಮುರುಗನ್ ಸಂಜೆ ವೇಳೆ ಸಚಿವರ ಮನೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಬೆದರಿಕೆ ಹಿನ್ನಲೆಯಲ್ಲಿ ಸಚಿವರ ಮನೆಗೆ ಭದ್ರತೆಯನ್ನು ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com