ಬೆಂಗಳೂರು: ಕಾವೇರಿ ಮೊದಲ ಹಂತದ ನೀರು ಸರಬರಾಜು ಯೋಜನೆಯ ಜಲ ಶುದ್ಧೀಕರಣ ಘಟಕ ದುರಸ್ತಿ ಕಾರ್ಯದ ನಿಮಿತ್ತ ಅ.28 ಮತ್ತು 29 ರಂದು ನಗರದ ಕೆಲ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಕತ್ರಿಗುಪ್ಪೆ, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ, ಬಿನ್ನಿಪೇಟೆ, ಜಯನಗರ 3 ,4 ಮತ್ತು 6 ನೇ ಬ್ಲಾಕ್ ಚಾಮರಾಜಪೇಟೆ, ಬನಶಂಕರಿ 3 ನೇ ಹಂತ, ಕುಮಾರಸ್ವಾಮಿ ಲೇಔಟ್, ಕೋರಮಂಗಲ, ವಿಲ್ಸನ್ ಗಾರ್ಡನ್, ಶಾಂತಿ ನಗರ, ಮಡಿವಾಳ, ಆಡುಗೋಡಿ, ದೊಮ್ಮಲೂರು, ಚಿಕ್ಕಲಕ್ಷ್ಮಯ್ಯ ಲೇಔಟ್, ರಂಗದಾಸಪ್ಪ ಲೇಔಟ್, ಚಂದ್ರಪ್ಪ ನಗರ, ಎಂ.ಜಿ ರಸ್ತೆ ಬ್ರಿಗೇಡ್ ರಸ್ತೆ, ವಿಕ್ಟೋರಿಯಾ ಲೇಔಟ್, ವಿವೇಕನಗರ, ಫರ್ದರ್ ಎಕ್ಸ್ ಟೆನ್ಸನ್, ನೀಲಸಂದ್ರ, ಅನೆಪಾಳ್ಯ, ಆಸ್ಟೀನ್ ಟೌನ್ ರಾಜೇಂದ್ರ ನಗರ, ರಾಷ್ಟ್ರೀಯ ಕ್ರೀಡಾ ಗ್ರಾಮ, ಜಾನ್ಸನ್ ಮಾರ್ಕೆಟ್, ಸಿಎಲ್ಆರ್, ಕನಕಪುರ ರಸ್ತೆ, ಸರಬಂಡೆಪಾಳ್ಯ, ಗಂಗಾಧರ ನಗರ, ಹರಿ ಕಾಲೋನಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಲ್ಲಿ ನೀರಿನ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆ ತಿಳಿಸಿದೆ.
Advertisement