ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ಡಿಪ್ಲೋಮಾ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ್ದ ಜಗದೀಶ್, ಬೆಂಗಳೂರಿನಲ್ಲಿ ಕ್ಯಾಷ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಕೆಲಸ ಹುಡುಕುತ್ತಿದ್ದ. ಎರಡು ಕಡೆ ಕೆಲಸ ಸಿಗದೆ ಇದ್ದ ಕಾರಣ ನಕಲಿ ರೆಸ್ಯೂಮ್ ನೀಡಿ ಬ್ರಿಂಕ್ಸ್ ಇಂಡಿಯಾ ಸಂಸ್ಥೆಗೆ ಕೆಲಸಕ್ಕೆ ಸೇರಿ ಪರಾರಿಯಾಗಿದ್ದ. ಬ್ಯಾಂಕಿನ ಸಿಸಿ ಕ್ಯಾಮರಾದಲ್ಲಿ ಆರೋಪಿಯ ಚಹರೆ ಹಾಗೂ ಮೊಬೈಲ್ ಫೋನ್ ಲೊಕೇಶನ್ ಆಧಾರಿಸಿ ತನಿಖೆ ನಡೆಸಿ ಆರೋಪಿ ಬಂಧಿಸಲಾಗಿದೆ. ಜಗದೀಶ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ವೇಳೆ ಆತನ ಹಿನ್ನೆಲೆ ಹಾಗೂ ರೆಸ್ಯೂಮ್ ಅನ್ನು ಸರಿಯಾಗಿ ಪರಿಶೀಲನೆ ಮಾಡದ ಬ್ರಿಂಕ್ಸ್ ಇಂಡಿಯಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ ರೆಡ್ಡಿ ತಿಳಿಸಿದರು. ಬ್ರಿಂಕ್ಸ್ ಇಂಡಿಯಾ ವಿವಿಧ ಬ್ಯಾಂಕ್ಗಳಿಂದ ಹಣ ಸಂಗ್ರಹಿಸಿ ಬಳಿಕ ಅದೇ ಬ್ಯಾಂಕ್ಗಳಿಗೆ ಸೇರಿದ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದೆ. ಹಣ ಸಾಗಣೆ ವೇಳೆ ವಾಹನದೊಂದಿಗೆ ಓರ್ವ ಗನ್ ಮಾನ್ ಚಾಲಕ ಹಾಗೂ ಇಬ್ಬರು ಸಿಬ್ಬಂದಿ ಕಳುಹಿಸಲಾಗುತ್ತದೆ. ಈ ಸಂಸ್ಥೆಗೆ ಆರೋಪಿ ಜಗದೀಶ್, ಅ.20ರಂದು ಕೆಲಸಕ್ಕೆ ಸೇರಿದ್ದ. ಆದರೆ, ಕೆಲಸಕ್ಕೆ ಸೇರುವಾಗ ಮಹೇಶ್ ಎಂದಿದ್ದ. ಆರೋಪಿ ಜಗದೀಶ್ ಸಿಎಂಎಸ್, ಎಸ್ಐಪಿಎಲ್ ಸಂಸ್ಥೆಯಲ್ಲಿ ಕೆಲಸ ಕೇಳಿದ್ದ. ಆದರೆ, ಡಿಪ್ಲೋಮಾ ಅಪೂರ್ಣವಾಗಿದ್ದರಿಂದ ಕೆಲಸ ಸಿಕ್ಕಿರಲಿಲ್ಲ. ಸಿಎಂಎಸ್ನಲ್ಲಿ ಕೆಲಸ ಕೇಳುವ ವೇಳೆ, ಜಗದೀಶನಿಗೆ ರೆಸ್ಯೂಮ್ ನೀಡುವಂತೆ ಅಲ್ಲಿನ ಎಚ್ಆರ್ ಹೇಳಿದ್ದರು. ರೆಸ್ಯೂಮ್ ಹೇಗಿರಬೇಕು ಎಂದಾಗ, ಅಲ್ಲಿನ ಎಚ್ಆರ್ ಈ ಮಾದರಿಯಲ್ಲಿ ರೆಸ್ಯೂಮ್ ಇರಲಿ ಎಂದು ಮಹೇಶ್ ಎಂಬ ಹೆಸರಿನ ರೆಸ್ಯೂಮ್ ಅನ್ನು ಕೊಟ್ಟಿದ್ದರು. ಅದರಲ್ಲಿ ಎಸ್ಎಸ್ಎಲ್ಸಿಅಂಕಪಟ್ಟಿ ಸೇರಿದಂತೆ ವಿದ್ಯಾರ್ಹತೆಯ ಸೆಟ್, ಫೋಟೊ