ಹಲ್ಲೆ ಮಾಡಿದ ಎಂಇಎಸ್ ಕಾರ್ಯಕರ್ತ
ಹಲ್ಲೆ ಮಾಡಿದ ಎಂಇಎಸ್ ಕಾರ್ಯಕರ್ತ

ರಾಜ್ಯೋತ್ಸವ ಆಚರಣೆ: ಕನ್ನಡಿಗನಿಗೆ ಚಾಕುವಿನಿಂದ ಇರಿದ ಎಂಇಎಸ್ ಕಾರ್ಯಕರ್ತ

ಕನ್ನಡ ರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿ ಮುಳುಗಿದ್ದ ಕನ್ನಡಗನೊಬ್ಬನಿಗೆ ಎಂಇಎಸ್ ಕಾರ್ಯಕರ್ತನೊಬ್ಬ ಚಾಕುವಿನಿಂದ...
Published on
ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿ ಮುಳುಗಿದ್ದ ಕನ್ನಡಿಗನೊಬ್ಬನಿಗೆ ಎಂಇಎಸ್ ಕಾರ್ಯಕರ್ತನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರು ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಎಂಇಎಸ್ ಕಾರ್ಯಕರ್ತನೊಬ್ಬ ಕನ್ನಡಿಗ ಸೌಕೇಶ್ ಜೈನ್ ಎಂಬಾತನ ಬಲ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ. 
ತಕ್ಷಣ ಆತನನ್ನು ಹಿಡಿದ ಸ್ಥಳೀಯರು ಥಳಿಸಿದ್ದು, ಬಳಿಕ ಸ್ಥಳದಲ್ಲಿದ್ದಂತಹ ಖಡೆ ಬಜಾರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿದ್ದ ಸೌಕೇಶ್ ಜೈನ್ ನನ್ನು ಬೆಳಗಾವಿಯ ಕೆಎಸ್ ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com