ಗುರುವಾರವಷ್ಟೆ ಚಿತ್ರನಟ ಸುದೀಪ್ ನರಗುಂದದಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಹಲವು ಸಂಘಟನೆಗಳ ಯುವ ಕಾರ್ಯಕರ್ತರು ಗದಗಿನಲ್ಲಿ ಮಹದಾಯಿ ನಕ್ಷೆಗೆ ರಕ್ತಾಭಿಷೇಕ ಮಾಡಿದರು. ಜತೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಮಹದಾಯಿ ನೀರಲ್ಲಿ ನಮ್ಮ ಹಕ್ಕು ಕೊಡಿಸಿ, ಬರಗಾಲದ ನೆಲದಲ್ಲಿ ಹಸಿರು ಚಿಗುರುವಂತೆ ಮಾಡಬೇಕೆಂದು ಮನವಿ ಮಾಡಿದರು.