ರಾಜಕೀಯ ಪ್ರವೇಶಿಸಲುಮುಕ್ತ ಮನಸ್ಸು: ಯದುವೀರ್

ರಾಜಕೀಯಕ್ಕೆ ಪ್ರವೇಶ ಮಾಡುವ ವಿಚಾರದಲ್ಲಿ ನಾನು ಮುಕ್ತ ಮನೋಭಾವ ಹೊಂದಿದ್ದೇನೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಶ್ರೀಕಂಠದತ್ತ ಒಡೆಯರ್ ಹೇಳಿದ್ದಾರೆ. ಮೈಸೂರು ರಾಜವಂಶಸ್ಥರ...
ಮೈಸೂರು ರಾಜವಂಶಸ್ಥ ಯದುವೀರ ಶ್ರೀಕಂಠದತ್ತ ಒಡೆಯರ್
ಮೈಸೂರು ರಾಜವಂಶಸ್ಥ ಯದುವೀರ ಶ್ರೀಕಂಠದತ್ತ ಒಡೆಯರ್

ಬೆಂಗಳೂರು:ರಾಜಕೀಯಕ್ಕೆ ಪ್ರವೇಶ ಮಾಡುವ ವಿಚಾರದಲ್ಲಿ ನಾನು ಮುಕ್ತ ಮನೋಭಾವ ಹೊಂದಿದ್ದೇನೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಶ್ರೀಕಂಠದತ್ತ ಒಡೆಯರ್ ಹೇಳಿದ್ದಾರೆ.

ಮೈಸೂರು ರಾಜವಂಶಸ್ಥರ ಉತ್ತರಾಧಿಕಾರಿಯಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ವಿಧಾನಸೌಧ ಪ್ರವೇಶ ಮಾಡಿದ ಅವರು, ಶನಿವಾರ ಸುದ್ದಿಗಾರರ ಜತೆ ಕೆಲ ಹೊತ್ತು ಮಾತನಾಡಿದರು. ಈ ಸಂದರ್ಭದಲ್ಲಿ ರಾಜಕಾರಣ ಪ್ರವೇಶಿಸುವ ವಿಚಾರದಲ್ಲಿ ಮುಕ್ತ ಮನಸು ಹೊಂದಿದ್ದೇನೆ ಎಂದರು.

ಸದ್ಯಕ್ಕೆ ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ.ರಾಷ್ಟ್ರ ರಾಜಕಾರಣ, ರಾಜ್ಯ ಕಾರಣದ ಪೈಕಿ ಯಾವುದು ಸೂಕ್ತ ಎಂಬುದರ ಬಗ್ಗೆಯೂ ನಾನಿನ್ನು ಚಿಂತನೆ ನಡೆಸಿಲ್ಲ.ರಾಜಕೀಯ ಪ್ರವೇಶಕ್ಕೆ ನಾನು ಯಾವ ರಾಜಕೀಯ ಪಕ್ಷ ಸೇರಬೇಕೆಂಬ ಬಗ್ಗೆಯೂ ಚಿಂತನೆ ನಡೆಸಿಲ್ಲ.  ಸದ್ಯಕ್ಕೆ ಈ ಬಗ್ಗೆ ಮುಕ್ತ ಮನಸು ಮಾತ್ರ ಹೊಂದಿದ್ದೇನೆ ಎಂದರು.

ಪ್ರಮೋದಾದೇವಿ ನಿರ್ಧರಿಸುತ್ತಾರೆ: ಅರಮನೆ ಆಸ್ತಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದಕ್ಕೆ ತಾವು ಚಿಂತನೆ ನಡೆಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದ ಬಗ್ಗೆ ರಾಣಿ ಪ್ರಮೋದಾದೇವಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. ನಂತರ ವಿಧಾನಸೌಧದಲ್ಲಿ ನಡೆದ ಕರ್ನಾಟಕ ಸರ್ಕಾರ ಸಚಿವಾಲಯ ಸಂಘದ ಪ್ರತಿಭಾ ಪುರಸ್ಕಾರದಲ್ಲಿ ಯದುವೀರ್ ಭಾಗಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com