ಸುಷ್ಮಾ ಮಧ್ಯ ಪ್ರವೇಶಕ್ಕೆ ರಾಜೀವ್ ಚಂದ್ರಶೇಖರ್ ಆಗ್ರಹ

ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ರಾಜ ತಾಂತ್ರಿಕ ವಿನಾಯಿತಿ ಬೇಡ ಎಂದು ಸಂಸದ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ...
ರಾಜೀವ್ ಚಂದ್ರ ಶೇಖರ್
ರಾಜೀವ್ ಚಂದ್ರ ಶೇಖರ್
Updated on

ಬೆಂಗಳೂರು: ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ  ರಾಜ ತಾಂತ್ರಿಕ ವಿನಾಯಿತಿ ಬೇಡ ಎಂದು ಸಂಸದ ರಾಜೀವ್  ಚಂದ್ರಶೇಖರ್  ಆಗ್ರಹಿಸಿದ್ದಾರೆ.

ನೇಪಾಳಿ ಯುವತಿಯ ಅತ್ಯಾಚಾರ ಪ್ರಕರಣಕ್ಕೆ  ಸಂಬಂಧಿಸಿದಂತೆ  ಸೌದಿ ಅರೇಬಿಯಾ ರಾಯಭಾರ ಕಚೇರಿಗೆ ರಾಜ ತಾಂತ್ರಿಕ ವಿನಾಯಿತಿ ನೀಡಬಾರದು ಹಾಗೂ ಪ್ರಕರಣಕ್ಕೆ  ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಮಧ್ಯ ಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೌದಿ ಸರ್ಕಾರಕ್ಕೆ ಈ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಬೇಕು ಹಾಗೂ ಕಲಂ 32 ರ ಅಡಿ ನೀಡಲಾಗಿದ್ದ ರಾಜತಾಂತ್ರಿಕ ವಿನಾಯಿತಿಯನ್ನು ಹಿಂಪಡೆಯುವಂತೆ ವಿನಂತಿಸಿಕೊಳ್ಳಬೇಕು.

ಅತ್ಯಾಚಾರದಂಥ ಪ್ರಕರಣಗಳಿಗೆ ರಾಜ ತಾಂತ್ರಿಕ  ರಕ್ಷಣೆ ಸಿಗಬಾರದು ಹಾಗೂ ತನ್ನ ನೆಲದ ಕಾನೂನುಗಳ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತ ರವಾನಿಸಬೇಕು ಎಂದು ಸಂಸದ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com